ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಮುಂಗಾರು ಸಂಭ್ರಮ: ಚುರುಕು ಪಡೆದ ಬಿತ್ತನೆ

ಬೀದರ್‌ ಜಿಲ್ಲೆಯಾದ್ಯಂತ ವ್ಯಾಪಿಸಿದ ಮುಂಗಾರು ಮಳೆ; ಕೃಷಿ ಚಟುವಟಿಕೆಗಳು ಬಿರುಸು
Published : 13 ಜೂನ್ 2024, 5:07 IST
Last Updated : 13 ಜೂನ್ 2024, 5:07 IST
ಫಾಲೋ ಮಾಡಿ
Comments
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬೀದರ್‌ ತಾಲ್ಲೂಕಿನ ಕಮಠಾಣ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಪರಿಶೀಲಿಸಿದರು
ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಬೀದರ್‌ ತಾಲ್ಲೂಕಿನ ಕಮಠಾಣ ರೈತ ಸಂಪರ್ಕ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಪರಿಶೀಲಿಸಿದರು
ಎಲ್ಲೆಲ್ಲಿ ಹಸಿ ಮಳೆಯಾಗಿದೆಯೋ ಅಂತಹ ಕಡೆ ರೈತರು ಬಿತ್ತನೆ ಕಾರ್ಯ ಆರಂಭಿಸಬಹುದು. ಸೋಯಾಬೀನ್‌ ತೊಗರಿ ಉದ್ದು ಹೆಸರು ಎಳ್ಳು ಬೆಳೆಯಬಹುದು.
–ಡಾ. ರತೇಂದ್ರನಾಥ ಸುಗೂರ ಜಂಟಿ ಕೃಷಿ ನಿರ್ದೇಶಕ ಬೀದರ್‌
ಕೋಹಿನೂರ್‌ ಸಾಯಗಾಂವ್‌ನಲ್ಲಿ ಹೆಚ್ಚು ಮಳೆ
ಬೀದರ್‌ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಂಗಳವಾರ ಸಂಜೆಯಿಂದ ತಡರಾತ್ರಿವರೆಗೆ ಉತ್ತಮ ವರ್ಷಧಾರೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 2.9 ಸೆಂ.ಮೀ ಮಳೆ ದಾಖಲಾಗಿದೆ. ಅತಿ ಹೆಚ್ಚಿನ ಮಳೆ ಬಸವಕಲ್ಯಾಣ ತಾಲ್ಲೂಕಿನ ಕೋಹಿನೂರ್‌ ಹೋಬಳಿಯಲ್ಲಿ ವರದಿಯಾಗಿದೆ. 18 ಸೆಂ.ಮೀ ಮಳೆಯಾಗಿದೆ. ಮಂಠಾಳನಲ್ಲಿ 7.4 ಸೆಂ.ಮೀ ಮುಡಬಿಯಲ್ಲಿ 7 ಸೆಂ.ಮೀ ಬಸವಕಲ್ಯಾಣದಲ್ಲಿ 6.9 ಸೆಂ.ಮೀ ಚಿಟಗುಪ್ಪದಲ್ಲಿ 6.6 ಸೆಂ.ಮೀ ಭಾಲ್ಕಿ ತಾಲ್ಲೂಕಿನ ಸಾಯಗಾಂವ್‌ನಲ್ಲಿ 8.8 ಸೆಂ.ಮೀ ಮಳೆ ದಾಖಲಾಗಿದೆ. ಹುಮನಾಬಾದ್‌ ತಾಲ್ಲೂಕಿನ ದುಬಲಗುಂಡಿಯಲ್ಲಿ 5.2 ಸೆಂ.ಮೀ ಮಳೆ ಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT