‘ಕರ್ನಾಟಕದ ಶ್ವಾನ ತಳಿಗೆ ಸೇನೆಯಲ್ಲಿ ಅವಕಾಶ ದೊರೆತಿರುವುದು ವಿಶೇಷವಾಗಿದೆ. ಯಾವುದೇ ವಾತಾವರಣಕ್ಕೆ ಒಗ್ಗಿಕೊಳ್ಳುವ ಹಾಗೂ ಗುರಿ ತಲುಪುವ ಸಾಮರ್ಥ್ಯ ಮುಧೋಳ ಬೇಟೆ ನಾಯಿಗೆ ಇದೆ. ತಾಂತ್ರಿಕ ಕಾರಣದಿಂದ ಸೇನೆಯಲ್ಲಿ ಸೇರಿಸಿಕೊಂಡಿರಲಿಲ್ಲ. ಸೇನೆಯ ಅಧಿಕಾರಿಗಳು ಕೇಳಿದ ಪೂರ್ಣ ಮಾಹಿತಿ ಪೂರೈಸಿದ ನಂತರ ಸೇನೆಯಲ್ಲಿ ಸೇರಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.