ಜೈವಿಕ ಹಾಗೂ ಬಹುಮಹಡಿ ಕೃಷಿ ಪದ್ಧತಿ ಕುರಿತು ಮಧ್ಯಪ್ರದೇಶದ ಜೈವಿಕ ಕೃಷಿ ತಜ್ಞ ಆಕಾಶ ಚೌರಾಸಿಯಾ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಡಾ. ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ ವಹಿಸುವರು. ಮುಖ್ಯ ಅತಿಥಿಗಳಾಗಿ ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಡಾ. ಶಿವಕುಮಾರ ಯಲಾಲ್, ಗೋ ಕೃಪಾಮೃತ ಜಲ ಸಂಪನ್ಮೂಲ ವ್ಯಕ್ತಿ ಪ್ರಭು ಸ್ವದೇಶಿ ಪಾಲ್ಗೊಳ್ಳಲಿದ್ದಾರೆ.