<p><strong>ಭಾಲ್ಕಿ</strong>: ‘ಬಸವಾದಿ ಶರಣರ ತತ್ವಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ಬಸವ, ಮೊರಂಬಿ ಉತ್ಸವದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಆಧುನಿಕ ಜೀವನ ಪದ್ಧತಿ, ಒತ್ತಡಯುಕ್ತ ಜೀವನ ಜನರ ನೆಮ್ಮದಿ ಕಸಿದುಕೊಂಡು ಬಿ.ಪಿ, ಶುಗರ್ ಸೇರಿದಂತೆ ಇತರ ರೋಗಗಳನ್ನು ಉಡುಗೊರೆಯಾಗಿ ನೀಡಿದೆ. ಒತ್ತಡ ರಹಿತ ಬದುಕು ನಡೆಸಲು ಪ್ರತಿಯೊಬ್ಬರೂ ವಚನಗಳ ಅಧ್ಯಯನ, ಅವುಗಳ ಆಚರಣೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.</p>.<p>ಗುರುಬಸವ ಪಟ್ಟದ್ದೇವರು ಮಾತನಾಡಿ,‘ಯುವಕರು ಸದ್ಗುಣಿಗಳಾಗಿ ಹೆತ್ತವರು ಹಾಗೂ ಗ್ರಾಮ ಹೆಮ್ಮೆ ಪಡುವಂತೆ ಆದರ್ಶ ಜೀವನ ನಡೆಸಬೇಕು’ ಎಂದರು.</p>.<p>ಹವಾ ಮಲ್ಲಿನಾಥ ಮಹಾರಾಜ, ಸಾಗರ ಖಂಡ್ರೆ, ರಮೇಶ ಚಿದ್ರಿ, ವಿಜಯಕುಮಾರ ವಾರದ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭಾಲ್ಕಿ</strong>: ‘ಬಸವಾದಿ ಶರಣರ ತತ್ವಗಳ ಆಚರಣೆಯಿಂದ ಸಮಾಜದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಹುಲಸೂರಿನ ಶಿವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.</p>.<p>ತಾಲ್ಲೂಕಿನ ಮೊರಂಬಿ ಗ್ರಾಮದಲ್ಲಿ ನಡೆದ ಬಸವ, ಮೊರಂಬಿ ಉತ್ಸವದ ಸಮಾರೋಪ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.</p>.<p>ಆಧುನಿಕ ಜೀವನ ಪದ್ಧತಿ, ಒತ್ತಡಯುಕ್ತ ಜೀವನ ಜನರ ನೆಮ್ಮದಿ ಕಸಿದುಕೊಂಡು ಬಿ.ಪಿ, ಶುಗರ್ ಸೇರಿದಂತೆ ಇತರ ರೋಗಗಳನ್ನು ಉಡುಗೊರೆಯಾಗಿ ನೀಡಿದೆ. ಒತ್ತಡ ರಹಿತ ಬದುಕು ನಡೆಸಲು ಪ್ರತಿಯೊಬ್ಬರೂ ವಚನಗಳ ಅಧ್ಯಯನ, ಅವುಗಳ ಆಚರಣೆಯತ್ತ ಗಮನ ಕೇಂದ್ರೀಕರಿಸಬೇಕು ಎಂದು ತಿಳಿಸಿದರು.</p>.<p>ಗುರುಬಸವ ಪಟ್ಟದ್ದೇವರು ಮಾತನಾಡಿ,‘ಯುವಕರು ಸದ್ಗುಣಿಗಳಾಗಿ ಹೆತ್ತವರು ಹಾಗೂ ಗ್ರಾಮ ಹೆಮ್ಮೆ ಪಡುವಂತೆ ಆದರ್ಶ ಜೀವನ ನಡೆಸಬೇಕು’ ಎಂದರು.</p>.<p>ಹವಾ ಮಲ್ಲಿನಾಥ ಮಹಾರಾಜ, ಸಾಗರ ಖಂಡ್ರೆ, ರಮೇಶ ಚಿದ್ರಿ, ವಿಜಯಕುಮಾರ ವಾರದ್ ಸೇರಿದಂತೆ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>