ಬೀದರ್: ನಗರದ ಟಿ.ಡಿ.ಬಿ.ಕಾಲೊನಿಯ ಸೇಂಟ್ ಜಾನ್ ವೆಸ್ಲಿ ಮೆಥೋಡಿಸ್ಟ್ ಚರ್ಚ್ನಲ್ಲಿ ಮಂಗಳವಾರ ಅಡವೆಂಟ್ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಚರ್ಚ್ನ ಸಭಾಪಾಲಕ ಪಿ.ಅನೀಲಕುಮಾರ ನೇತೃತ್ವದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಮಹಿಳಾ ತಂಡದವರು ಕ್ರಿಸ್ಮಸ್ ವಿಶೇಷ ಗೀತೆಗಳನ್ನು ಹಾಡಿದರು. ನಂತರ ಸಾಮೂಹಿಕವಾಗಿ ಕೇಕ್ ಕತ್ತರಿಸಲಾಯಿತು.
ಸೇಂಟ್ ಜಾನ್ ಜಾನ್ ವೆಸ್ಲಿ ಚರ್ಚ್ ಸಭಾ ಪಾಲಕರು, ಸಭಾ ಪಾಲನಾ ಸಮಿತಿಯ ಹಿರಿಯರು, ಮಹಿಳೆಯರು, ಮಕ್ಕಳು ಪಾಲ್ಗೊಂಡಿದ್ದರು.