<p><strong>ಹುಮನಾಬಾದ್:</strong> ಹೈದ್ರಬಾದ್ ಕರ್ನಾಟಕ ಅಭಿವೃದ್ದಿ ಶಿಕ್ಷಣ ಟ್ರಸ್ಟ್ ವತಿಯಿಂದ ಸಮೀಪದ ಮಾಣಿಕನಗರದ ಮಾಣಿಕಸೌಧದಲ್ಲಿ ಸೋಮವಾರ ದಂತ ಶಿಕ್ಷಣ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಜರುಗಿತು.</p>.<p>ಶಾಸಕ ರಾಜಶೇಖರ ಪಾಟೀಲ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿ,‘ಈ ಭಾಗದ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ದಿ.ಬಸವರಾಜ ಪಾಟೀಲ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ’ ಎಂದರು.</p>.<p>ಹುಮನಾಬಾದ್ ಪಟ್ಟಣದಲ್ಲಿ 1978ರಿಂದ ವಿವಿಧ ಪದವಿ ಕಾಲೇಜು, ಪಿಯುಸಿ, ಡೆಂಟಲ್, ಫಾರ್ಮಸಿ, ಐಟಿಐ, ಆರ್ಯುವೇದ ಸೇರಿದಂತೆ ವಿವಿಧ ಕಾಲೇಜು ಸ್ಥಾಪಿಸಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.</p>.<p>ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಮ್ಮ ಭಾಗದಲ್ಲಿ ರಾಷ್ಟ್ರಮಟ್ಟದ ದಂತ ಶಿಕ್ಷಣ ವಿಚಾರ ಸಂಕಿರಣ ಆಯೋಜಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ವಿಚಾರ ಸಂಕಿರಣದ ಲಾಭ ಪಡೆದು, ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.</p>.<p>ಮಾಜಿ ಶಾಸಕರು ಡಿಸಿಐ ಮಾಜಿ ಸದಸ್ಯ ಡಾ. ಸುಧಾಕರ ಎಂ.ಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಮಾತನಾಡಿದರು. ಡಾ.ಶಿವಶರಣ ಕೆ. ಡಾ. ವಿನಯಕುಮಾರ ಹಿರೇಮಠ, ಡಾ.ಸತೀಶ ಪಾಟೀಲ, ಡಾ. ಸುಧೀರ ಹೊಂಗಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಮನಾಬಾದ್:</strong> ಹೈದ್ರಬಾದ್ ಕರ್ನಾಟಕ ಅಭಿವೃದ್ದಿ ಶಿಕ್ಷಣ ಟ್ರಸ್ಟ್ ವತಿಯಿಂದ ಸಮೀಪದ ಮಾಣಿಕನಗರದ ಮಾಣಿಕಸೌಧದಲ್ಲಿ ಸೋಮವಾರ ದಂತ ಶಿಕ್ಷಣ ಕುರಿತ ರಾಷ್ಟ್ರಮಟ್ಟದ ವಿಚಾರ ಸಂಕಿರಣ ಜರುಗಿತು.</p>.<p>ಶಾಸಕ ರಾಜಶೇಖರ ಪಾಟೀಲ ವಿಚಾರ ಸಂಕಿರಣವನ್ನು ಉದ್ಘಾಟಿಸಿದರು.</p>.<p>ಬಳಿಕ ಮಾತನಾಡಿ,‘ಈ ಭಾಗದ ಬಡ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುವುದಕ್ಕಾಗಿ ದಿ.ಬಸವರಾಜ ಪಾಟೀಲ ಅವರು ಶಿಕ್ಷಣ ಸಂಸ್ಥೆ ಸ್ಥಾಪಿಸಿದ್ದಾರೆ’ ಎಂದರು.</p>.<p>ಹುಮನಾಬಾದ್ ಪಟ್ಟಣದಲ್ಲಿ 1978ರಿಂದ ವಿವಿಧ ಪದವಿ ಕಾಲೇಜು, ಪಿಯುಸಿ, ಡೆಂಟಲ್, ಫಾರ್ಮಸಿ, ಐಟಿಐ, ಆರ್ಯುವೇದ ಸೇರಿದಂತೆ ವಿವಿಧ ಕಾಲೇಜು ಸ್ಥಾಪಿಸಿ ನಮ್ಮ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.</p>.<p>ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ನಮ್ಮ ಭಾಗದಲ್ಲಿ ರಾಷ್ಟ್ರಮಟ್ಟದ ದಂತ ಶಿಕ್ಷಣ ವಿಚಾರ ಸಂಕಿರಣ ಆಯೋಜಿಸಿರುವುದು ಸಂತಸ ತಂದಿದೆ. ವಿದ್ಯಾರ್ಥಿಗಳು ವಿಚಾರ ಸಂಕಿರಣದ ಲಾಭ ಪಡೆದು, ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.</p>.<p>ಮಾಜಿ ಶಾಸಕರು ಡಿಸಿಐ ಮಾಜಿ ಸದಸ್ಯ ಡಾ. ಸುಧಾಕರ ಎಂ.ಸಿ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ ಅವರು ಮಾತನಾಡಿದರು. ಡಾ.ಶಿವಶರಣ ಕೆ. ಡಾ. ವಿನಯಕುಮಾರ ಹಿರೇಮಠ, ಡಾ.ಸತೀಶ ಪಾಟೀಲ, ಡಾ. ಸುಧೀರ ಹೊಂಗಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>