‘ರಾಜ್ಯ, ತೆಲಂಗಾಣ, ಆಂದ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಂದಲೂ ನಿತ್ಯ ನೂರಾರು ಭಕ್ತರು ದೇಗುಲಕ್ಕೆ ಆಗಮಿಸುತ್ತಾರೆ. ಹೀಗಾಗಿ ಭಕ್ತರಿಗೆ ಮೂಲ ಸೌಲಭ್ಯ ಒದಗಿಸಬೇಕಾದದ್ದು ಸರ್ಕಾರದ ಕರ್ತವ್ಯ. ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟಡದ ದುರಸ್ತಿ ಬಗ್ಗೆ ಗಮನ ಸೆಳೆಯಲಾಗಿದೆ. ಆದರೂ ಇದುವರೆಗೂ ಯಾವುದೇ ಪ್ರಯೋಜನ ಕಂಡುಬಂದಿಲ್ಲ. ನಿತ್ಯದ ಆದಾಯ ನಿರೀಕ್ಷೆಗೂ ಹೆಚ್ಚಿದೆ. ದೂರದಿಂದ ಬರುವ ಭಕ್ತರು ರಾತ್ರಿ ದೇಗುಲದಲ್ಲಿ ತಂಗುವುದರಿಂದ ಶಿಥಿಲ ಕಟ್ಟಡ ಬೇಗ ದುರಸ್ತಿ ಕೈಗೊಳ್ಳಬೇಕಿದೆ’ ಎಂದು ದೇಗುಲದ ಭಕ್ತ ಶಂಕರೆಪ್ಪ ನುಡಿಯುತ್ತಾರೆ.