‘ಈ ಕಾರ್ಯಕ್ರಮ ಸಂಬಂಧ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ. ಅನುಮತಿ ಪಡೆಯದೇ ನನ್ನ, ನಮ್ಮ ಗುರುಗಳ ಫೋಟೋ ಬಳಸಿಕೊಂಡ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವುದು ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿದೆ. ಇದರಿಂದ ಮನಸ್ಸಿಗೆ ಆಘಾತವಾಗಿದೆ. ನಂತರ ಆಯೋಜಕರು ಬಂದು ಕಾರ್ಯಕ್ರಮಕ್ಕೆ ಬರಬೇಕು ಎಂದು ಕೇಳಿಕೊಂಡಿದ್ದಾರೆ. ಅನುಮತಿ ಪಡೆಯದೆ ಪೋಸ್ಟರ್ನಲ್ಲಿ ನಮ್ಮ ಫೋಟೋಗಳನ್ನು ಬಳಸಿರುವುದು ತಪ್ಪಲ್ಲವೇ ಎಂದು ಆಯೋಜಕರನ್ನು ಪ್ರಶ್ನಿಸಿದ್ದೆ. ತಮ್ಮಿಂದ ತಪ್ಪಾಗಿದ್ದು, ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಆಯೋಜಕರು ಕ್ಷಮೆಯಾಚಿಸಿದ್ದಾರೆ’ ಎಂದು ಗುರುಬಸವ ಪಟ್ಟದ್ದೇವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.