<p><strong>ಚಿಟಗುಪ್ಪ:</strong> ತಾಲ್ಲೂಕಿನಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಪಟ್ಟಣ ತಾಲ್ಲೂಕಿನ ಬನ್ನಳ್ಳಿ, ವಳಖಿಂಡಿ ಗ್ರಾಮಗಳು ಸೇರಿ ಒಟ್ಟು ಮೂರು ಮನೆಗಳ ಗೋಡೆ ಗುರುವಾರ ಮಧ್ಯರಾತ್ರಿ ಕುಸಿದಿವೆ.</p>.<p>ಪಟ್ಟಣದ ಅಶ್ವಿನಿ ಕಾಶಿನಾಥ ಅವರ ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಬೆಳಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಳ್ಳಿ ಗ್ರಾಮದ ಹಣಮಂತರಾವ್ ಚನ್ನಪ್ಪ ಎಂಬುವವರ ಮನೆಯ ಮುಖ್ಯ ದ್ವಾರದ ಮೇಲಿನ ಗೋಡೆ ಜೋರಾದ ಮಳೆಗೆ ಕುಸಿದಿದೆ.</p>.<p>ತಾಲ್ಲೂಕಿನ ವಳಖಿಂಡಿ ಗ್ರಾಮದ ನರಸಮ್ಮ ಬಂಡೆಪ್ಪ ಅವರ ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ಮನೆಯ ಒಳಗಡೆ ಇದ್ದವರು ಜೋರಾದ ಶಬ್ದಕ್ಕೆ ತಕ್ಷಣ ಹೊರಗಡೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಚಾಂಗಲೇರಾ, ಬೇಮಳಖೇಡಾ, ಮಂಗಲಗಿ, ತಾಳಮಡಗಿ, ಕಂದಗೂಳ್, ಶಾಮತಾಬಾದ್ ಗ್ರಾಮಗಳಲ್ಲಿ ನಿತ್ಯ ಮೇಲಿಂದ ಮೇಲೆ ಮಳೆ ಸುರಿದಿದೆ.</p>.<p>‘ಹೊಲಗದ್ದೆಗಳಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ತೆಗೆಯಲು ರೈತರು ಕ್ರಿಮಿನಾಶಕ ಸಿಂಪರಣೆ ಮಾಡುವು ದಕ್ಕೂ ಆಗದಂತಾಗಿದೆ. ನಾಗರಿಕರು ಮನೆಗಳಿಂದ ಹೊರ ಬರದಂತಾಗಿದೆ’ ಎಂದು ಮಂಗಲಗಿ ಗ್ರಾಮದ ರುದ್ರಪ್ಪ ನಾಗನಕೇರಾ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ:</strong> ತಾಲ್ಲೂಕಿನಲ್ಲಿ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಪಟ್ಟಣ ತಾಲ್ಲೂಕಿನ ಬನ್ನಳ್ಳಿ, ವಳಖಿಂಡಿ ಗ್ರಾಮಗಳು ಸೇರಿ ಒಟ್ಟು ಮೂರು ಮನೆಗಳ ಗೋಡೆ ಗುರುವಾರ ಮಧ್ಯರಾತ್ರಿ ಕುಸಿದಿವೆ.</p>.<p>ಪಟ್ಟಣದ ಅಶ್ವಿನಿ ಕಾಶಿನಾಥ ಅವರ ಮನೆಯ ಒಂದು ಬದಿಯ ಗೋಡೆ ಸಂಪೂರ್ಣವಾಗಿ ಕುಸಿದಿದೆ. ಬೆಳಕೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಳ್ಳಿ ಗ್ರಾಮದ ಹಣಮಂತರಾವ್ ಚನ್ನಪ್ಪ ಎಂಬುವವರ ಮನೆಯ ಮುಖ್ಯ ದ್ವಾರದ ಮೇಲಿನ ಗೋಡೆ ಜೋರಾದ ಮಳೆಗೆ ಕುಸಿದಿದೆ.</p>.<p>ತಾಲ್ಲೂಕಿನ ವಳಖಿಂಡಿ ಗ್ರಾಮದ ನರಸಮ್ಮ ಬಂಡೆಪ್ಪ ಅವರ ಮನೆಯ ಗೋಡೆ ಸಂಪೂರ್ಣ ಕುಸಿದಿದೆ. ಮನೆಯ ಒಳಗಡೆ ಇದ್ದವರು ಜೋರಾದ ಶಬ್ದಕ್ಕೆ ತಕ್ಷಣ ಹೊರಗಡೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.</p>.<p>ತಾಲ್ಲೂಕಿನ ನಿರ್ಣಾ, ಮುತ್ತಂಗಿ, ಚಾಂಗಲೇರಾ, ಬೇಮಳಖೇಡಾ, ಮಂಗಲಗಿ, ತಾಳಮಡಗಿ, ಕಂದಗೂಳ್, ಶಾಮತಾಬಾದ್ ಗ್ರಾಮಗಳಲ್ಲಿ ನಿತ್ಯ ಮೇಲಿಂದ ಮೇಲೆ ಮಳೆ ಸುರಿದಿದೆ.</p>.<p>‘ಹೊಲಗದ್ದೆಗಳಲ್ಲಿ ಬೆಳೆಯ ಮಧ್ಯೆ ಬೆಳೆದ ಕಳೆ ತೆಗೆಯಲು ರೈತರು ಕ್ರಿಮಿನಾಶಕ ಸಿಂಪರಣೆ ಮಾಡುವು ದಕ್ಕೂ ಆಗದಂತಾಗಿದೆ. ನಾಗರಿಕರು ಮನೆಗಳಿಂದ ಹೊರ ಬರದಂತಾಗಿದೆ’ ಎಂದು ಮಂಗಲಗಿ ಗ್ರಾಮದ ರುದ್ರಪ್ಪ ನಾಗನಕೇರಾ ಅವರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>