ಕಮಲನಗರ: ತಾಲ್ಲೂಕಿನಲ್ಲಿ ಬಯಲು ಬಹಿರ್ದೆಸೆ ಇನ್ನೂ ಅಬಾಧಿತವಾಗಿದೆ.
ಹಳ್ಳಿಗಳಲ್ಲಿ ವೈಯಕ್ತಿಕ ಶೌಚಾಲಯಗಳನ್ನು ಕಟ್ಟಿಸಿಕೊಂಡರು ಸಹ ಜನ ಅವುಗಳನ್ನು ಬಳಕೆ ಮಾಡುತ್ತಿಲ್ಲ. ಶೌಚಕ್ಕೆ ಬಯಲಿಗೆ ತೆರಳುತ್ತಾರೆ.
ಸ್ವಚ್ಛ ಭಾರತ ಮಿಷನ್ ಅಡಿ ಗ್ರಾಮ ಪಂಚಾಯಿತಿಗಳಿಂದ ಸಬ್ಸಿಡಿ ಪಡೆದು ಕಮಲನಗರ 1130, ಸೋನಾಳ 816, ದಾಬಕಾ 1300, ಠಾಣಾಕುಶನೂರ 1030, ಡೋಣಗಾಂವ (ಎಂ) 1110 ಹಾಗೂ ಚೀಕ್ಲಿ (ಯು) ಗ್ರಾಮದಲ್ಲಿ 872 ಜನ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಂಡಿದ್ದಾರೆ. ಅವು ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ.
‘ಅಧಿಕಾರಿಗಳು ಶೌಚಾಲಯ ಹಾಗೂ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಬೇಕು. ಜನರೂ ಸ್ವಚ್ಛತೆಗೆ ಆದ್ಯತೆ ನೀಡಬೇಕು’ ಎನ್ನುತ್ತಾರೆ ನಿವಾಸಿ ಕಲ್ಯಾಣರಾವ ಬಿರಾದಾರ ಸೋನಾಳ.