<p><strong>ಬೀದರ್:</strong> ರಾಜ್ಯದ ರಾಜಕೀಯದಲ್ಲಿ ಬದಲಾವಣೆಯಾದ ಸಂದರ್ಭದಲ್ಲೇ ತರಕಾರಿ ಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟ ಕೆಳಗಿಳಿದಿದೆ. ನುಗ್ಗೆಕಾಯಿ ಪ್ರತಿಸ್ಪರ್ಧಿಯಂತೆ ಎದ್ದು ನಿಂತಿದೆ.</p>.<p>ರಾಜಕೀಯ ಊಹಾಪೋಹಗಳು ತನ್ನಗಾದ ಮಾದರಿಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ನುಗ್ಗೆಕಾಯಿ, ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 1 ಸಾವಿರ, ಆಲೂಗಡ್ಡೆ ₹ 1,500 ಹಾಗೂ ಎಲೆಕೋಸು ₹ 500 ಹೆಚ್ಚಾಗಿದೆ. ಅತಿವೃಷ್ಟಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹಾರಾಡಿದ್ದ ಈರುಳ್ಳಿ ಎರಡು ವಾರಗಳಿಂದ ಮೆತ್ತಗಾಗಿದೆ. ಮೆಣಸಿನಕಾಯಿ ಸಿಟ್ಟು ಕಡಿಮೆ ಮಾಡಿಕೊಂಡಿದೆ. ಈರುಳ್ಳಿ, ಮೆಣಸಿನಕಾಯಿ ಹಾಗೂ ತೊಂಡೆಕಾಯಿ ಬೆಲೆ ಸ್ಥಿರವಾಗಿದೆ.</p>.<p>ನಾಯಕತ್ವ ಬದಲಾವಣೆಯಾದಂತೆ ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಹಿರಿತನ ಕಳೆದುಕೊಂಡಿದೆ. ಬೆಂಡೆಕಾಯಿ ಬೆಂಡಾಗಿದೆ. ಒಳಗೆ ಕೆಂಪು ಮೇಲೆ ಹಸಿರು ಕಾಣುವ ತೊಂಡೆಕಾಯಿ ಅವಾಜ್ ಬಂದ್ ಆಗಿದೆ. ಟೊಮೆಟೊ ಹಣ್ಣು ಗಾಯಿ ನೀರಗಾಯಿ ಆಗಿದೆ. ಕೊತಂಬರಿಯ ಘಮ ಘಮವೂ ಕಡಿಮೆಯಾಗಿದೆ.</p>.<p><a href="https://www.prajavani.net/district/belagavi/flood-and-heavy-rain-7800-crore-loss-in-belagavi-855235.html" itemprop="url">ಪ್ರವಾಹ, ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ₹7,800 ಕೋಟಿ ಹಾನಿ: ಕಾರಜೋಳ </a></p>.<p>ಮೆಂತೆ ಸೊಪ್ಪು ಬೆಲೆ ಪ್ರತಿ ಕ್ವಿಂಟಲ್ಗೆ ₹ 3 ಸಾವಿರ, ಬೀನ್ಸ್, ಹೂಕೋಸು ₹ 2 ಸಾವಿರ, ಹಿರೇಕಾಯಿ ₹ 1,500,<br />ಬದನೆಕಾಯಿ, ಬೆಂಡೆಕಾಯಿ, ಗಜ್ಜರಿ, ಪಾಲಕ್ ₹ 1 ಸಾವಿರ, ಬೀಟ್ರೂಟ್, ಟೊಮೆಟೊ, ಸಬ್ಬಸಗಿ, ಕರಿಬೇವು ₹ 500 ಇಳಿದಿದೆ. ಕೊತಂಬರಿ ₹ 6,500ಕ್ಕೆ ಇಳಿಕೆ ಕಂಡಿದೆ.</p>.<p>ಹುಮನಾಬಾದ್, ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ತರಕಾರಿ ಬೀದರ್ ಸಗಟು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸಹಜವಾಗಿಯೇ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನಾಗರ ಅಮಾವಾಸ್ಯೆಯ ದಿನ ಇನ್ನಷ್ಟು ಭಕ್ತಿಭಾವದಿಂದ ನಾಗ ಪೂಜೆ ಸಲ್ಲಿಸುವಂತೆ ಆಗಿದೆ.</p>.<p>ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ತರಕಾರಿ ಬೆಳೆಗಳು ಹಾಳಾಗಿವೆ. ಮೆಣಸಿನಕಾಯಿ ಗಿಡಗಳು ನೀರಿನಲ್ಲಿ ನಿಂತಿರುವ ಕಾರಣ ರೈತರು ಸ್ವಲ್ಪಮಟ್ಟಿಗಾದರೂ ಬೆಳೆ ಕೈಸೇರಲಿ ಎನ್ನುವ ಆಶಾ ಭಾವನೆಯಿಂದ ಮೆಣಸಿನಕಾಯಿ ಬಿಡಿಸಿ ಮಾರುಕಟ್ಟೆಗೆ ಕಳಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದು ಬೆಲೆ ಕಡಿಮೆಯಾಗಿದೆ.</p>.<p>ನೆರೆಯ ರಾಜ್ಯಗಳ ಸೋಲಾಪುರ, ನಾಸಿಕ್, ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ತರಕಾರಿಗಳ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಎರಡು ವಾರ ತರಕಾರಿ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.</p>.<p><a href="https://www.prajavani.net/karnataka-news/chief-minister-basavaraj-bommai-announces-night-curfew-across-the-state-and-weekend-lockdown-in-855211.html" itemprop="url">ರಾಜ್ಯದಾದ್ಯಂತ ನೈಟ್ ಕರ್ಫ್ಯೂ,ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್: ಬೊಮ್ಮಾಯಿ </a></p>.<p><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ</strong><br />ತರಕಾರಿ (ಪ್ರತಿ ಕೆ.ಜಿ.) - ಕಳೆದ ವಾರ - ಈ ವಾರ<br />ಈರುಳ್ಳಿ 25-30. 20-30<br />ಮೆಣಸಿನಕಾಯಿ 25-30, 25-30<br />ಆಲೂಗಡ್ಡೆ 20-25. 30-40<br />ಎಲೆಕೋಸು 30-35, 35-40<br />ಬೆಳ್ಳುಳ್ಳಿ 80-90, 80-100<br />ಗಜ್ಜರಿ 50-60, 40-50<br />ಬೀನ್ಸ್ 70-80, 50-60<br />ಬದನೆಕಾಯಿ 50-60, 40-50<br />ಮೆಂತೆ ಸೊಪ್ಪು 60-80, 40-50<br />ಹೂಕೋಸು 50-60, 30-40<br />ಸಬ್ಬಸಗಿ 40-50, 40-45<br />ಬೀಟ್ರೂಟ್ , 40-50, 40-45<br />ತೊಂಡೆಕಾಯಿ 30-40, 30-40<br />ಕರಿಬೇವು 30-40, 30-35<br />ಕೊತಂಬರಿ 80-100, 40-45<br />ಟೊಮೆಟೊ 20-30, 20-25<br />ಪಾಲಕ್ 50-60, 40-50<br />ಬೆಂಡೆಕಾಯಿ 50-60, 40-50<br />ಹಿರೇಕಾಯಿ 40-50, 30-35<br />ನುಗ್ಗೆಕಾಯಿ 40-50. 50-60</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ರಾಜ್ಯದ ರಾಜಕೀಯದಲ್ಲಿ ಬದಲಾವಣೆಯಾದ ಸಂದರ್ಭದಲ್ಲೇ ತರಕಾರಿ ಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವಾಗಿದೆ. ತರಕಾರಿ ರಾಜ ಬದನೆಕಾಯಿ ಕಿರೀಟ ಕೆಳಗಿಳಿದಿದೆ. ನುಗ್ಗೆಕಾಯಿ ಪ್ರತಿಸ್ಪರ್ಧಿಯಂತೆ ಎದ್ದು ನಿಂತಿದೆ.</p>.<p>ರಾಜಕೀಯ ಊಹಾಪೋಹಗಳು ತನ್ನಗಾದ ಮಾದರಿಯಲ್ಲಿ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ನುಗ್ಗೆಕಾಯಿ, ಬೆಳ್ಳುಳ್ಳಿ ಬೆಲೆ ಪ್ರತಿ ಕ್ವಿಂಟಲ್ಗೆ ₹ 1 ಸಾವಿರ, ಆಲೂಗಡ್ಡೆ ₹ 1,500 ಹಾಗೂ ಎಲೆಕೋಸು ₹ 500 ಹೆಚ್ಚಾಗಿದೆ. ಅತಿವೃಷ್ಟಿಯ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಹಾರಾಡಿದ್ದ ಈರುಳ್ಳಿ ಎರಡು ವಾರಗಳಿಂದ ಮೆತ್ತಗಾಗಿದೆ. ಮೆಣಸಿನಕಾಯಿ ಸಿಟ್ಟು ಕಡಿಮೆ ಮಾಡಿಕೊಂಡಿದೆ. ಈರುಳ್ಳಿ, ಮೆಣಸಿನಕಾಯಿ ಹಾಗೂ ತೊಂಡೆಕಾಯಿ ಬೆಲೆ ಸ್ಥಿರವಾಗಿದೆ.</p>.<p>ನಾಯಕತ್ವ ಬದಲಾವಣೆಯಾದಂತೆ ತರಕಾರಿ ಮಾರುಕಟ್ಟೆಯಲ್ಲಿ ಹಿರೇಕಾಯಿ ಹಿರಿತನ ಕಳೆದುಕೊಂಡಿದೆ. ಬೆಂಡೆಕಾಯಿ ಬೆಂಡಾಗಿದೆ. ಒಳಗೆ ಕೆಂಪು ಮೇಲೆ ಹಸಿರು ಕಾಣುವ ತೊಂಡೆಕಾಯಿ ಅವಾಜ್ ಬಂದ್ ಆಗಿದೆ. ಟೊಮೆಟೊ ಹಣ್ಣು ಗಾಯಿ ನೀರಗಾಯಿ ಆಗಿದೆ. ಕೊತಂಬರಿಯ ಘಮ ಘಮವೂ ಕಡಿಮೆಯಾಗಿದೆ.</p>.<p><a href="https://www.prajavani.net/district/belagavi/flood-and-heavy-rain-7800-crore-loss-in-belagavi-855235.html" itemprop="url">ಪ್ರವಾಹ, ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ₹7,800 ಕೋಟಿ ಹಾನಿ: ಕಾರಜೋಳ </a></p>.<p>ಮೆಂತೆ ಸೊಪ್ಪು ಬೆಲೆ ಪ್ರತಿ ಕ್ವಿಂಟಲ್ಗೆ ₹ 3 ಸಾವಿರ, ಬೀನ್ಸ್, ಹೂಕೋಸು ₹ 2 ಸಾವಿರ, ಹಿರೇಕಾಯಿ ₹ 1,500,<br />ಬದನೆಕಾಯಿ, ಬೆಂಡೆಕಾಯಿ, ಗಜ್ಜರಿ, ಪಾಲಕ್ ₹ 1 ಸಾವಿರ, ಬೀಟ್ರೂಟ್, ಟೊಮೆಟೊ, ಸಬ್ಬಸಗಿ, ಕರಿಬೇವು ₹ 500 ಇಳಿದಿದೆ. ಕೊತಂಬರಿ ₹ 6,500ಕ್ಕೆ ಇಳಿಕೆ ಕಂಡಿದೆ.</p>.<p>ಹುಮನಾಬಾದ್, ಚಿಟಗುಪ್ಪ, ಭಾಲ್ಕಿ ಹಾಗೂ ಬೀದರ್ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಿಂದ ಹೆಚ್ಚಿನ ತರಕಾರಿ ಬೀದರ್ ಸಗಟು ಮಾರುಕಟ್ಟೆಗೆ ಬಂದಿದೆ. ಹೀಗಾಗಿ ಸಹಜವಾಗಿಯೇ ಬಹುತೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನಾಗರ ಅಮಾವಾಸ್ಯೆಯ ದಿನ ಇನ್ನಷ್ಟು ಭಕ್ತಿಭಾವದಿಂದ ನಾಗ ಪೂಜೆ ಸಲ್ಲಿಸುವಂತೆ ಆಗಿದೆ.</p>.<p>ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದಾಗಿ ತರಕಾರಿ ಬೆಳೆಗಳು ಹಾಳಾಗಿವೆ. ಮೆಣಸಿನಕಾಯಿ ಗಿಡಗಳು ನೀರಿನಲ್ಲಿ ನಿಂತಿರುವ ಕಾರಣ ರೈತರು ಸ್ವಲ್ಪಮಟ್ಟಿಗಾದರೂ ಬೆಳೆ ಕೈಸೇರಲಿ ಎನ್ನುವ ಆಶಾ ಭಾವನೆಯಿಂದ ಮೆಣಸಿನಕಾಯಿ ಬಿಡಿಸಿ ಮಾರುಕಟ್ಟೆಗೆ ಕಳಿಸಿದ್ದಾರೆ. ಅಧಿಕ ಪ್ರಮಾಣದಲ್ಲಿ ಮೆಣಸಿನಕಾಯಿ ಬಂದು ಬೆಲೆ ಕಡಿಮೆಯಾಗಿದೆ.</p>.<p>ನೆರೆಯ ರಾಜ್ಯಗಳ ಸೋಲಾಪುರ, ನಾಸಿಕ್, ಹೈದರಾಬಾದ್ ಸುತ್ತಮುತ್ತಲಿನ ಪ್ರದೇಶಗಳಿಂದ ಬರುವ ತರಕಾರಿಗಳ ಬೆಲೆ ಮಾತ್ರ ಕಡಿಮೆಯಾಗಿಲ್ಲ. ಇನ್ನೂ ಎರಡು ವಾರ ತರಕಾರಿ ಬೆಲೆ ಸ್ಥಿರವಾಗಿರುವ ಸಾಧ್ಯತೆ ಇದೆ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.</p>.<p><a href="https://www.prajavani.net/karnataka-news/chief-minister-basavaraj-bommai-announces-night-curfew-across-the-state-and-weekend-lockdown-in-855211.html" itemprop="url">ರಾಜ್ಯದಾದ್ಯಂತ ನೈಟ್ ಕರ್ಫ್ಯೂ,ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಲಾಕ್ಡೌನ್: ಬೊಮ್ಮಾಯಿ </a></p>.<p><strong>ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ</strong><br />ತರಕಾರಿ (ಪ್ರತಿ ಕೆ.ಜಿ.) - ಕಳೆದ ವಾರ - ಈ ವಾರ<br />ಈರುಳ್ಳಿ 25-30. 20-30<br />ಮೆಣಸಿನಕಾಯಿ 25-30, 25-30<br />ಆಲೂಗಡ್ಡೆ 20-25. 30-40<br />ಎಲೆಕೋಸು 30-35, 35-40<br />ಬೆಳ್ಳುಳ್ಳಿ 80-90, 80-100<br />ಗಜ್ಜರಿ 50-60, 40-50<br />ಬೀನ್ಸ್ 70-80, 50-60<br />ಬದನೆಕಾಯಿ 50-60, 40-50<br />ಮೆಂತೆ ಸೊಪ್ಪು 60-80, 40-50<br />ಹೂಕೋಸು 50-60, 30-40<br />ಸಬ್ಬಸಗಿ 40-50, 40-45<br />ಬೀಟ್ರೂಟ್ , 40-50, 40-45<br />ತೊಂಡೆಕಾಯಿ 30-40, 30-40<br />ಕರಿಬೇವು 30-40, 30-35<br />ಕೊತಂಬರಿ 80-100, 40-45<br />ಟೊಮೆಟೊ 20-30, 20-25<br />ಪಾಲಕ್ 50-60, 40-50<br />ಬೆಂಡೆಕಾಯಿ 50-60, 40-50<br />ಹಿರೇಕಾಯಿ 40-50, 30-35<br />ನುಗ್ಗೆಕಾಯಿ 40-50. 50-60</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>