ಭಾಲ್ಕಿ: ತಾಲ್ಲೂಕಿನ ನೀಲಮನಳ್ಳಿ, ನೀಲಮನಳ್ಳಿ ತಾಂಡಾ, ರುದನೂರ ಸೇರಿದಂತೆ ಇತರೆಡೆ ಶನಿವಾರ ಸಂಜೆ ಸುರಿದ ಭಾರಿ ಮಳೆಗೆ ಗ್ರಾಮ ಸಮೀಪದ ಹಳ್ಳಗಳು ತುಂಬಿವೆ.
ಹಳ್ಳಗಳ ಅಕ್ಕಪಕ್ಕದ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ. ಹೊಲಗಳಿಗೆ ತೆರಳಿದ ರೈತರು ಮನೆಗಳಿಗೆ ತೆರಳಲು ಹಳ್ಳಗಳಲ್ಲಿ ನೀರಿನ ಪ್ರಮಾಣ ತಗ್ಗುವರೆಗೆ ಕಾದು ನಂತರ ಮನೆ ಸೇರಿದ್ದಾರೆ ಎಂದು ಗ್ರಾಮಸ್ಥ ಸಂತೋಷ ಶೆಡೋಳೆ ತಿಳಿಸಿದರು.
ಹಲಬರ್ಗಾ, ಕೋನಮೇಳಕುಂದಾ, ಧನ್ನೂರ, ಸೇವಾನಗರ ಸೇರಿದಂತೆ ಇತರೆಡೆ ಸಾಧಾರಣ ಮಳೆ ಆಗಿದೆ.