ದೇಶದಲ್ಲಿ ಪ್ರತಿ 10 ವರ್ಷಗಳಿಗೊಮ್ಮೆ ನಡೆಯುವ ಜನಗಣತಿಯಲ್ಲಿ ಪ್ರತಿ ಪ್ರಜೆಗೂ ತನ್ನ ಧರ್ಮ ನಮೂದಿಸಲು ಸಂವಿಧಾನ ಅವಕಾಶ ಕಲ್ಪಿಸಿದೆ. ಹೀಗಾಗಿ ತಮ್ಮ ಧರ್ಮ ಉಲ್ಲೇಖಿಸುವಲ್ಲಿ ಲಿಂಗಾಯತರು ಹಿಂದೆ ಬೀಳಬಾರದು. ಒಗ್ಗಟ್ಟಿನ ಕಾರಣ ಭಾರತದಲ್ಲೇ ಜನ್ಮ ತಳೆದ ಸಿಖ್ಖ, ಜೈನ, ಬೌದ್ಧ ಧರ್ಮಗಳು ಸ್ವತಂತ್ರ ಧರ್ಮ ಮಾನ್ಯತೆ ಹಾಗೂ ಅಲ್ಪಸಂಖ್ಯಾತರ ಸ್ಥಾನಮಾನ ದಕ್ಕಿಸಿಕೊಂಡಿವೆ. ಆ ಧರ್ಮಗಳ ಜನ ಸರ್ಕಾರದ ವಿವಿಧ ಸೌಲಭ್ಯಗಳ ಪ್ರಯೋಜನವನ್ನೂ ಪಡೆಯುತ್ತಿದ್ದಾರೆ. ಲಿಂಗಾಯತಕ್ಕೂ ಸ್ವತಂತ್ರ ಧರ್ಮ ಹಾಗೂ ಅಲ್ಪಸಂಖ್ಯಾತ ಮಾನ್ಯತೆ ಪಡೆ ಯಲು ಒಗ್ಗಟ್ಟು ಪ್ರದರ್ಶಿಸಬೇಕಿದೆ ಎಂದಿದ್ದಾರೆ.