ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಕನಕ ಯುವ ಪ್ರಶಸ್ತಿ ಪಡೆದಿರುವ ಡಾ.ಗವಿಸಿದ್ದಪ್ಪ ಪಾಟೀಲ ಹಾಗೂ ತುಕಾರಾಮ ಮಲ್ಲಪ್ಪ ಅವರನ್ನು ಸನ್ಮಾನಿಸಲಾಯಿತು. ಬೇಲೂರ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮೀಜಿ, ಗೌರ ಬೀರಪ್ಪ ಮುತ್ತ್ಯಾ, ಮಲ್ಲಿಕಾರ್ಜುನ ಪೂಜಾರಿ, ಬಾಬು ಜಗಜೀವನರಾಂ ಅಭಿವೃದ್ಧಿ ನಿಗಮದ ನಿರ್ದೇಶಕ ಅರ್ಜುನ ಕನಕ, ಶಿವರಾಜ ನರಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ನಿರ್ಮಲಾ ಮಾನಿಗೋಪಾಳೆ, ರಾಜಶೇಖರ ಮೇತ್ರೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಯಲ್ಲಮ್ಮ ತುಕಾರಾಮ, ಜಬ್ಬಾರಸಾಬ್ ಗೋಬರೆ, ವಿಕ್ರಮ ಪಾಟೀಲ, ಧನರಾಜ ದೊಡ್ಮನಿ, ನಗರಸಭೆ ಅಧ್ಯಕ್ಷ ಅಜರ ಅಲಿ ನವರಂಗ, ವೀರಣ್ಣ ಪಾಟೀಲ ಉಪಸ್ಥಿತರಿದ್ದರು. ಕಿಣ್ಣಿವಾಡಿ ಜೈಹನುಮಾನ ಕಲಾತಂಡದಿಂದ ಜನಪದ ಗೀತೆ ಹಾಡಲಾಯಿತು. ವಿವಿಧ ಗ್ರಾಮಗಳ ತಂಡಗಳಿಂದ ಡೊಳ್ಳು ಕುಣಿತ ಪ್ರದರ್ಶಿಸಲಾಯಿತು.