ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಔರಾದ್ ತಾಲ್ಲೂಕು ಕೇಂದ್ರದಲ್ಲಿದ್ದ ಎಸ್ಬಿಎಚ್, ಎಸ್ಬಿಎಂ ಶಾಖೆಗಳನ್ನು ಎಸ್ಬಿಐನೊಂದಿಗೆ ವಿಲೀನ ಮಾಡಲಾಗಿದೆ. ಇಲ್ಲಿರುವ ಎಸ್ಬಿಐ ಶಾಖೆ ಹಳೆಯದಾಗಿದ್ದು, ಸ್ಥಳಾವಕಾಶದ ಕೊರತೆ ಇದೆ. ವಿಲೀನದ ನಂತರ ಮೂರು ಶಾಖೆಗಳ ಖಾತೆದಾರರು ಒಂದೆಡೆ ಬರುವ ಕಾರಣ ಹೆಚ್ಚಿನ ದಟ್ಟಣೆ ಇರುತ್ತದೆ. ಸಣ್ಣ ಕೆಲಸಕ್ಕೂ ಗಂಟೆಗಟ್ಟಲೆ ಕಾಯಬೇಕಾಗಿದೆ ಎಂದು ಅವರು ಹೇಳಿದ್ದಾರೆ.