ಈ ವರ್ಷದ ಆರಂಭದಿಂದಲೇ ಪಕ್ಷ ಚುನಾವಣಾ ಸಿದ್ಧತೆ ಆರಂಭಿಸಿದೆ. ಪ್ರಮುಖರ ಸಭೆ, ಸಮರ್ಪಣಾ ದಿನ, ಮನೆ ಮನೆಗೆ ಭೇಟಿ, ಬೂತ್ಮಟ್ಟದ ಕಾರ್ಯಕ್ರಮಗಳು, ಮನೆಗಳ ಮೇಲೆ ಬಿಜೆಪಿ ಧ್ವಜಾ ಹಾರಾಟ, ದೊಡ್ಡ ತೆರೆಯಲ್ಲಿ ಪ್ರಧಾನಿ ಭಾಷಣ ಪ್ರಸಾರ, ಕಮಲಜ್ಯೋತಿ, ಬೈಕ್ ರ್ಯಾಲಿ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಚುನಾವಣಾ ಸಿದ್ಧತೆ ಸಾಗಿದೆ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ರುದ್ರೇಗೌಡ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.