ಶಾಸಕ ಡಾ.ಶಿವರಾಜ ಪಾಟೀಲ ಮಾತನಾಡಿ, ಕಾಲುವೆ ಕೊನೆ ಭಾಗಕ್ಕೆ ನೀರು ತಲುಪಿಸದಿದ್ದರೆ ಸರ್ಕಾರ ವಿಫಲವಾದಂತೆ ಆಗುತ್ತದೆ. ರೈತರು ಅನುಭವಿಸುತ್ತಿರುವ ಸಂಕಷ್ಟವನ್ನು ಅರ್ಥ ಮಾಡಿಕೊಳ್ಳಬೇಕು. ತುಂಗಭದ್ರಾ ಹಾಗೂ ಕೃಷ್ಣಾ ನದಿಗಳ ಎರಡೂ ಕಾಲುವೆಗೂ ಸಿರವಾರ, ಮಾನ್ವಿ ಹಾಗೂ ಸಿರವಾರ ತಾಲ್ಲೂಕುಗಳು ಕೊನೆಭಾಗದಲ್ಲಿವೆ. ಕಾಲುವೆ ಮೇಲ್ಭಾಗದಲ್ಲಿ ಅಕ್ರಮಗಳನ್ನು ತಡೆದು ಕೊನೆಭಾಗಕ್ಕೆ ನೀರು ತಲುಪಿಸುವ ಕೆಲಸವನ್ನು ನೀರಾವರಿ ಎಂಜಿನಿಯರುಗಳು ಮಾಡಬೇಕು ಎಂದರು.
ಪ್ರಭಾಕರ ಪಾಟೀಲ, ಬೂದಯ್ಯಸ್ವಾಮಿ ಮತ್ತಿತರರು ಇದ್ದರು.