ಸಾಗರ: ಇಲ್ಲಿನ ಕೆಳದಿ ರಸ್ತೆಯಲ್ಲಿನಿರ್ಬಂಧದ ನಡುವೆಯೂ ಅಡ್ಡಾಡುತ್ತಿದ್ದ ಯುವಕರಿಗೆ ಪೊಲೀಸ್ ಸಿಬ್ಬಂದಿ ಬಸ್ಕಿ ಹೊಡೆಯುವ ಶಿಕ್ಷೆ ವಿಧಿಸಿದ್ದಾರೆ. ಹೀಗೆ ಶಿಕ್ಷೆ ವಿಧಿಸಿರುವ ವಿಡಿಯೊಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಬಸ್ಕಿ ಹೊಡೆಸುವ ಜೊತೆಗೆ ನಿರ್ಬಂಧ ಉಲ್ಲಂಘಿಸಿದ್ದಕ್ಕೆ ‘ನನ್ನಿಂದ ತಪ್ಪಾಗಿದೆ. ಪೊಲೀಸರ ವಿರುದ್ಧ ಮಾತನಾಡುವುದಿಲ್ಲ. ಮನೆಯಿಂದ ಹೊರಗೆ ಬರುವುದಿಲ್ಲ’ ಎಂದು ಯುವಕರಿಂದ ಹೇಳಿಸಿ ನಂತರ ಅವರನ್ನು ಮನೆಗೆ ಕಳುಹಿಸಲಾಗುತ್ತಿದೆ.