ಊರಿನ ಗೌಡರು ಮತ್ತು ಸೈಕಲ್ ನಡುವಿನ ಸಂಬಂಧವನ್ನು ಹಾಸ್ಯಮಯವಾಗಿ ಹೇಳುವುದು ಈ ಸಿನಿಮಾದ ಹೂರಣ. ‘ಹಳೆಯದಾಯಿತು ಎಂಬ ಕಾರಣಕ್ಕೆ ವಸ್ತುಗಳನ್ನು ಮತ್ತು ವಯಸ್ಸಾಯಿತು ಎಂಬ ಕಾರಣಕ್ಕೆ ಮನುಷ್ಯರನ್ನು ನಿರ್ಲಕ್ಷಿಸಬಾರದು’ ಎಂಬ ಸಂದೇಶವನ್ನೂ ಈ ಚಿತ್ರ ಹೊಂದಿದೆಯಂತೆ. ಮಂಡ್ಯ, ಚಿಕ್ಕ ಅರಸೀಕೆರೆ, ಮೆಣಸಿನಕೆರೆ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ.