‘ನದಿಗಿಳಿಯದಂತೆ ನಿರ್ಬಂಧ ವಿಧಿಸಿ’
ಶಿವನಸಮುದ್ರ ವೆಸ್ಟಿ ಸೇತುವೆ ದರ್ಗಾ ಹಾಗೂ ಭರಚುಕ್ಕಿ ಜಲಪಾತದ ಹಿಂಭಾಗದ ಕಾವೇರಿ ನದಿಯ ಸಮೀಪ ಪೊಲೀಸ್ ಕಣ್ಗಾವಲು ಇರುವುದಿಲ್ಲ. ಹಾಗಾಗಿ ಯುವಜನತೆ ಅಂಜಿಕೆ ಇಲ್ಲದೆ ನದಿಗೆ ಇಳಿಯುತ್ತಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಜರುಗಿಸಿದರೆ ದುರ್ಘಟನೆಗಳು ನಡೆಯುವುದಿಲ್ಲ. ಕಾಟಾಚಾರಕ್ಕೆ ಬೀಟ್ ಮಾಡಿದರೆ ಸಾಲದು ವಾರಾಂತ್ಯದ ದಿನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ಎಲ್ಲೆಡೆ ಕಾನೂನು ಕ್ರಮದ ಎಚ್ಚರಿಕೆಯ ಫಲಕಗಳನ್ನು ಅಳವಡಿಸಬೇಕು ಎಂದು ಶಿವನಸಮುದ್ರ ಗ್ರಾಮದ ನಿವಾಸಿಗಳು ಹೇಳಿದರು.