ಜಿಲ್ಲಾಡಳಿತ ಭವನದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿರುವ ಮಾಲತಿ ಅವರು ಇದೇ 21ರಂದು ಚೇತನ್ ಅವರಿಗೆ ಕರೆ ಮಾಡಿ ಮದುವೆ ಸಹಾಯಧನದ ಅರ್ಜಿ ಹಾಗೂ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರುವಂತೆ ತಿಳಿಸಿದ್ದರು. ಅದರಂತೆ ಚೇತನ್ ಅವರು ಬುಧವಾರ (ಜ.28) ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮಾಲತಿ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಮಾಲತಿ ಅವರು ಹಿರಿಯ ಲೇಬರ್ ಇನ್ಸ್ಪೆಕ್ಟರ್ ಗೀತಾ ಅವರನ್ನು ಪರಿಚಯಿಸಿದ್ದರು. ಈ ಸಂದರ್ಭದಲ್ಲಿ ಹಣ ಮಂಜೂರು ಮಾಡಲು ₹3,000 ಹಣಕ್ಕೆ ಇಬ್ಬರೂ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಚೇತನ್ ಅವರು ಎಸಿಬಿಗೆ ದೂರು ನೀಡಿದ್ದರು.