ಸಿದ್ದಪ್ಪಾಜಿ ಅವರು ಈಗಾಗಲೇ ₹2 ಸಾವಿರ ಕೊಟ್ಟಿದ್ದರು. ₹13 ಸಾವಿರ ನೀಡುವುದಕ್ಕೂ ಮೊದಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ದೂರು ನೀಡಿದ್ದರು. ಗುರುವಾರ ಸಿದ್ದಪ್ಪಾಜಿ ಅವರಿಂದ ಪ್ರವೀಣ್ ಅವರು ₹13 ಸಾವಿರ ಪಡೆಯುತ್ತಿದ್ದಾಗ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.₹13 ಸಾವಿರ ನಗದನ್ನು ಜಪ್ತಿ ಮಾಡಿರುವ ಎಸಿಬಿ ಪೊಲೀಸರು, ಪ್ರವೀಣ್ ಅವರನ್ನು ವಶಕ್ಕೆ ಪಡೆದಿದ್ದಾರೆ.