ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕರ ಸಂಕ್ರಾಂತಿ: ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಗೆ ಬೆಣ್ಣೆ ಅಲಂಕಾರ

Published 15 ಜನವರಿ 2024, 14:02 IST
Last Updated 15 ಜನವರಿ 2024, 14:02 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಇಲ್ಲಿನ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯದಲ್ಲಿ ಸೋಮವಾರ ವಿಶೇಷ ಪೂಜೆ ನಡೆಯಿತು.

 ಲಕ್ಷ್ಮೀ ನಾರಾಯಣ್ವಾಮಿ, ಗರುಡಕಂಬ ಆಂಜನೇಯ, ಗಣಪತಿ ಮೂರ್ತಿಗಳಿಗೆ ಸುಮಾರು 25 ಕೆ.ಜಿ.ಯಷ್ಟು ಬೆಣ್ಣೆ ಅಲಂಕಾರ ಮಾಡಿ ಸೌಮ್ಯನಾಯಕಿ ಮೂರ್ತಿಗೆ ಹೂವಿನ ಅಲಂಕಾರ ಮಾಡಲಾಯಿತು.

ಇಂದು ಮುಂಜಾನೆ 4:30ರ ಸಮಯದಲ್ಲಿ ಸುಪ್ರಭಾತ ಸೇವೆ, ಅಭಿಷೇಕ ನಡೆಸಿ ಬೆಣ್ಣೆ ಅಲಂಕಾರ ಮಾಡಲಾಯಿತು. ಹಾಗೂ ಧನುರ್ಮಾಸದ ಸಮಾಪ್ತಿ ದೇವರಿಗೆ ಸಕ್ಕರೆ ಪೊಂಗಲ್ ನೈವೇದ್ಯ ಹಾಗೂ ಬಂದ ಭಕ್ತಾದಿಗಳಿಗೆ ತೀರ್ಥಪ್ರಸಾದ ವಿನಿಯೋಗ ನಡೆಯಿತು.

ಸಂಜೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಮಕರ ಮಾಸ ಪ್ರಾರಂಭವಾದ ದಿನವಾದ ಇಂದು ಉತ್ತರ ದ್ವಾರ(ಸ್ವರ್ಗದ ಬಾಗಿಲು)ನ್ನು ತೆರೆದು ಅಲ್ಲಿಂದ ಉತ್ಸವ ಮೂರ್ತಿ ಹೊರಬಂದು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇಂದಿನ ಎಲ್ಲಾ ಪೂಜಾ ಕೈಕರ್ಯಗಳನ್ನು ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಸುದರ್ಶನ ಭಟ್ ನೆರವೇರಿಸಿದರು. ಹಾಗೂ ದೇವಸ್ಥಾನದ ಆಡಳಿತವರ್ಗದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT