ಸಂಜೆ ಉತ್ಸವಮೂರ್ತಿಗೆ ಪೂಜೆ ಸಲ್ಲಿಸಿ, ಮಕರ ಮಾಸ ಪ್ರಾರಂಭವಾದ ದಿನವಾದ ಇಂದು ಉತ್ತರ ದ್ವಾರ(ಸ್ವರ್ಗದ ಬಾಗಿಲು)ನ್ನು ತೆರೆದು ಅಲ್ಲಿಂದ ಉತ್ಸವ ಮೂರ್ತಿ ಹೊರಬಂದು ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಇಂದಿನ ಎಲ್ಲಾ ಪೂಜಾ ಕೈಕರ್ಯಗಳನ್ನು ಪ್ರಧಾನ ಅರ್ಚಕ ಶೇಷಾದ್ರಿ ಭಟ್, ಸುದರ್ಶನ ಭಟ್ ನೆರವೇರಿಸಿದರು. ಹಾಗೂ ದೇವಸ್ಥಾನದ ಆಡಳಿತವರ್ಗದವರು ಇದ್ದರು.