‘ಜಮೀನಿನ ಪಂಪ್ಸೆಟ್ಗೆ ವಿದ್ಯುತ್ ಪಡೆಯಲು ಕಂಬ ಅಳವಡಿಸುವಂತೆ 2012ರಲ್ಲಿ ₹13,400 ಪಾವತಿಸಿದ್ದೆ. ಆದರೆ, ಈವರೆಗೂ ಕಂಬ ಅಳವಡಿಸಿಲ್ಲ. ಐದು ಜನಸಂಪರ್ಕ ಸಭೆಗಳಲ್ಲೂ ಈ ಬಗ್ಗೆ ಅಹವಾಲು ಸಲ್ಲಿಸಿದ್ದೇನೆ. ಆದರೆ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಲೊಕ್ಕನಹಳ್ಳಿ ಗ್ರಾಮದ ರೈತ ತಂಗಮುತ್ತು ಗೌಂಡರ್ ಆರೋಪಿಸಿದರು.