<p><strong>ಚಾಮರಾಜನಗರ:</strong> ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಮಯೂರ ಲಾಡ್ಜ್ ಪಾಲುದಾರರೊಬ್ಬರು ಶುಕ್ರವಾರ ಮುಂಜಾವು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ಅಮ್ಜಾದ್ (35) ಆತ್ಮಹತ್ಯೆ ಮಾಡಿಕೊಂಡವರು.</p>.<p>ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಲಾಡ್ಕ್ನ ಇನ್ನೊಬ್ಬ ಪಾಲುದಾರ ಮುತಾಲಿಬ್ ಹಾಗೂ ಮ್ಯಾನೇಜರ್ ಜಮ್ಶೀರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಅಮ್ಜಾದ್ ಹಾಗೂ ಮುತಾಲಿಬ್ ಇಬ್ಬರೂ ಬಂಡವಾಳ ಹೂಡಿ ಲಾಡ್ಜ್ ನಡೆಸುತ್ತಿದ್ದರು. ಅಮ್ಜಾದ್ ಅವರು ವಾರದಿಂದೀಚೆಗೆ ತಾವು ಬಂಡವಾಳ ಹೂಡಿದ್ದ ಮೊತ್ತವನ್ನು ವಾಪಸ್ ಕೊಡುವಂತೆ ಮುತಾಲಿಬ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಮುತಾಲಿಬ್ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಈ ವಿಚಾರವಾಗಿ ಇಬ್ಬರಿಗೂ ಮಾತಾಗಿತ್ತು. ಎರಡು ತಿಂಗಳುಗಳಿಂದ ಊರಿಗೆ ಹೋಗಲು ಆಗಿಲ್ಲ ಎಂಬ ಬೇಸರವೂ ಅವರಿಗಿತ್ತು. ದುಡ್ಡು ಕೂಡ ಬಾರದೇ ಇದ್ದುದರಿಂದ ಶುಕ್ರವಾರ ಮುಂಜಾವು 3 ಗಂಟೆ ಸುಮಾರಿಗೆ ಲಾಡ್ಜ್ ಕೊಠಡಿಯಲ್ಲಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ತನಗೆ ಏನಾದರೂ ಆದರೆ ಅದಕ್ಕೆ ಮುತಾಲಿಬ್ ಮತ್ತು ಜಮ್ಶೀರ್ ಅವರೇ ಕಾರಣ ಎಂದು ಅಮ್ಜಾದ್ ಅವರು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದರು. ಅವರ ಸಹೋದರ ಉಮರ್ ಎಂಬುವರು ನೀಡಿರುವ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಸ್ಥಳಕ್ಕೆ ಎಎಸ್ಪಿ ಅನಿತಾ ಬಿ.ಹದ್ದಣ್ಣವರ್, ನಗರ ಠಾಣೆ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಸಮೀಪದ ಮಯೂರ ಲಾಡ್ಜ್ ಪಾಲುದಾರರೊಬ್ಬರು ಶುಕ್ರವಾರ ಮುಂಜಾವು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.</p>.<p>ಕೇರಳದ ಮಲಪ್ಪುರಂ ಜಿಲ್ಲೆಯ ನಿವಾಸಿ ಅಮ್ಜಾದ್ (35) ಆತ್ಮಹತ್ಯೆ ಮಾಡಿಕೊಂಡವರು.</p>.<p>ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಲಾಡ್ಕ್ನ ಇನ್ನೊಬ್ಬ ಪಾಲುದಾರ ಮುತಾಲಿಬ್ ಹಾಗೂ ಮ್ಯಾನೇಜರ್ ಜಮ್ಶೀರ್ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.</p>.<p>ಅಮ್ಜಾದ್ ಹಾಗೂ ಮುತಾಲಿಬ್ ಇಬ್ಬರೂ ಬಂಡವಾಳ ಹೂಡಿ ಲಾಡ್ಜ್ ನಡೆಸುತ್ತಿದ್ದರು. ಅಮ್ಜಾದ್ ಅವರು ವಾರದಿಂದೀಚೆಗೆ ತಾವು ಬಂಡವಾಳ ಹೂಡಿದ್ದ ಮೊತ್ತವನ್ನು ವಾಪಸ್ ಕೊಡುವಂತೆ ಮುತಾಲಿಬ್ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಮುತಾಲಿಬ್ ನೀಡಿರಲಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.</p>.<p>ಈ ವಿಚಾರವಾಗಿ ಇಬ್ಬರಿಗೂ ಮಾತಾಗಿತ್ತು. ಎರಡು ತಿಂಗಳುಗಳಿಂದ ಊರಿಗೆ ಹೋಗಲು ಆಗಿಲ್ಲ ಎಂಬ ಬೇಸರವೂ ಅವರಿಗಿತ್ತು. ದುಡ್ಡು ಕೂಡ ಬಾರದೇ ಇದ್ದುದರಿಂದ ಶುಕ್ರವಾರ ಮುಂಜಾವು 3 ಗಂಟೆ ಸುಮಾರಿಗೆ ಲಾಡ್ಜ್ ಕೊಠಡಿಯಲ್ಲಿ ಪೆಟ್ರೋಲ್, ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.</p>.<p>ತನಗೆ ಏನಾದರೂ ಆದರೆ ಅದಕ್ಕೆ ಮುತಾಲಿಬ್ ಮತ್ತು ಜಮ್ಶೀರ್ ಅವರೇ ಕಾರಣ ಎಂದು ಅಮ್ಜಾದ್ ಅವರು ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಹಾಕಿಕೊಂಡಿದ್ದರು. ಅವರ ಸಹೋದರ ಉಮರ್ ಎಂಬುವರು ನೀಡಿರುವ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.</p>.<p>ಸ್ಥಳಕ್ಕೆ ಎಎಸ್ಪಿ ಅನಿತಾ ಬಿ.ಹದ್ದಣ್ಣವರ್, ನಗರ ಠಾಣೆ ಇನ್ಸ್ಪೆಕ್ಟರ್ ಎನ್.ಸಿ.ನಾಗೇಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>