<p><strong>ಚಾಮರಾಜನಗರ</strong>: 2019–20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಈ ವರ್ಷವೂ 12ನೇ ಸ್ಥಾನ ಗಳಿಸಿದೆ. ಶೇ 69.29 ಫಲಿತಾಂಶ ದಾಖಲಾಗಿದೆ.</p>.<p>ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 72.67) ಈ ವರ್ಷ ಶೇಕಡವಾರು ಫಲಿತಾಂಶದಲ್ಲಿ ಕುಸಿತವಾಗಿದೆ. 5,686 ವಿದ್ಯಾರ್ಥಿಗಳು (ಖಾಸಗಿ, ಪುನರಾವರ್ತಿತರನ್ನು ಬಿಟ್ಟು) ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 3,940 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.</p>.<p class="Subhead">ವಿದ್ಯಾರ್ಥಿನಿಯರ ಮೇಲುಗೈ: ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಲ್ಲಿ ಶೇ 69.57ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 52.84ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.</p>.<p>ಪರೀಕ್ಷೆ ಬರೆದ 3,674 ಹೆಣ್ಣುಮಕ್ಕಳ ಪೈಕಿ 2,556 ಹಾಗೂ 3,119 ಗಂಡು ಮಕ್ಕಳ ಪೈಕಿ 1,648 ಮಂದಿ ಉತ್ತೀರ್ಣರಾಗಿದ್ದಾರೆ.</p>.<p class="Subhead">ಕಲಾವಿಭಾಗದಲ್ಲಿ ಕುಸಿದ ಫಲಿತಾಂಶ: ವಿಭಾಗವಾರು ಫಲಿತಾಂಶವನ್ನು ಪರಿಶೀಲಿಸಿದರೆ, ಕಲಾವಿಭಾಗದ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.</p>.<p>ವಾಣಿಜ್ಯ ವಿಭಾಗದಲ್ಲಿ 2,329 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,857 ಮಂದಿ ಉತ್ತೀರ್ಣರಾಗಿ ಶೇ 79.73ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 1,266 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 960 ಮಂದಿ ಪಾಸಾಗಿ, ಶೇ 75.83ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದ 2,091 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, 1,123 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಶೇಕಡವಾರು 53.71ರಷ್ಟುಫಲಿತಾಂಶ ಬಂದಿದೆ.</p>.<p class="Subhead">ನಗರ ಪ್ರದೇಶದವರು ಮುಂದು: ನಗರ ಪ್ರದೇಶದಲ್ಲಿ ಶೇ 71.31 ಫಲಿತಾಂಶ ಬಂದಿದೆ. 3,876ರ ವಿದ್ಯಾರ್ಥಿಗಳ ಪೈಕಿ 2,764 ಮಂದಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದ 1,810 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,176 ಮಂದಿ ಉತ್ತೀರ್ಣರಾಗಿ ಶೇ 64.97 ಫಲಿತಾಂಶ ದಾಖಲಾಗಿದೆ.</p>.<p>‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇಕಡವಾರು ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದೆ. ಕಲಾ ವಿಭಾಗದಲ್ಲಿ ಫಲಿತಾಂಶ ಕಡಿಮೆ ಬಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ಖಾಸಗಿ, ಪುನರಾವರ್ತಿತರ ಫಲಿತಾಂಶವೂ ಕಡಿಮೆ</strong></p>.<p>ಜಿಲ್ಲೆಯಲ್ಲಿ ಖಾಸಗಿಯಾಗಿ 257 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 57 ಮಂದಿಯಷ್ಟೇ ತೇರ್ಗಡೆಯಾಗಿದ್ದಾರೆ. ಶೇ 22.18 ಫಲಿತಾಂಶ ಬಂದಿದೆ.</p>.<p>850 ಮಂದಿ ಪುನರಾವರ್ತಿತರರು ಪರೀಕ್ಷೆ ಬರೆದಿದ್ದು, 207 ಜನ ಉತ್ತೀರ್ಣರಾಗಿದ್ದಾರೆ. ಶೇ 24.35ರಷ್ಟು ಫಲಿತಾಂಶ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: 2019–20ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ಗಡಿ ಜಿಲ್ಲೆ ಚಾಮರಾಜನಗರ ಈ ವರ್ಷವೂ 12ನೇ ಸ್ಥಾನ ಗಳಿಸಿದೆ. ಶೇ 69.29 ಫಲಿತಾಂಶ ದಾಖಲಾಗಿದೆ.</p>.<p>ಕಳೆದ ವರ್ಷಕ್ಕೆ ಹೋಲಿಸಿದರೆ (ಶೇ 72.67) ಈ ವರ್ಷ ಶೇಕಡವಾರು ಫಲಿತಾಂಶದಲ್ಲಿ ಕುಸಿತವಾಗಿದೆ. 5,686 ವಿದ್ಯಾರ್ಥಿಗಳು (ಖಾಸಗಿ, ಪುನರಾವರ್ತಿತರನ್ನು ಬಿಟ್ಟು) ಪರೀಕ್ಷೆ ಬರೆದಿದ್ದಾರೆ. ಈ ಪೈಕಿ 3,940 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.</p>.<p class="Subhead">ವಿದ್ಯಾರ್ಥಿನಿಯರ ಮೇಲುಗೈ: ಪ್ರತಿ ವರ್ಷದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿಯರಲ್ಲಿ ಶೇ 69.57ರಷ್ಟು ಮಂದಿ ತೇರ್ಗಡೆ ಹೊಂದಿದ್ದಾರೆ. ಶೇ 52.84ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.</p>.<p>ಪರೀಕ್ಷೆ ಬರೆದ 3,674 ಹೆಣ್ಣುಮಕ್ಕಳ ಪೈಕಿ 2,556 ಹಾಗೂ 3,119 ಗಂಡು ಮಕ್ಕಳ ಪೈಕಿ 1,648 ಮಂದಿ ಉತ್ತೀರ್ಣರಾಗಿದ್ದಾರೆ.</p>.<p class="Subhead">ಕಲಾವಿಭಾಗದಲ್ಲಿ ಕುಸಿದ ಫಲಿತಾಂಶ: ವಿಭಾಗವಾರು ಫಲಿತಾಂಶವನ್ನು ಪರಿಶೀಲಿಸಿದರೆ, ಕಲಾವಿಭಾಗದ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ. ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತೇರ್ಗಡೆ ಹೊಂದಿದ್ದಾರೆ.</p>.<p>ವಾಣಿಜ್ಯ ವಿಭಾಗದಲ್ಲಿ 2,329 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,857 ಮಂದಿ ಉತ್ತೀರ್ಣರಾಗಿ ಶೇ 79.73ರಷ್ಟು ಫಲಿತಾಂಶ ದಾಖಲಾಗಿದೆ. ವಿಜ್ಞಾನ ವಿಭಾಗದಲ್ಲಿ 1,266 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ 960 ಮಂದಿ ಪಾಸಾಗಿ, ಶೇ 75.83ರಷ್ಟು ಫಲಿತಾಂಶ ಬಂದಿದೆ. ಕಲಾ ವಿಭಾಗದ 2,091 ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿದ್ದು, 1,123 ಮಂದಿಯಷ್ಟೇ ಉತ್ತೀರ್ಣರಾಗಿದ್ದಾರೆ. ಶೇಕಡವಾರು 53.71ರಷ್ಟುಫಲಿತಾಂಶ ಬಂದಿದೆ.</p>.<p class="Subhead">ನಗರ ಪ್ರದೇಶದವರು ಮುಂದು: ನಗರ ಪ್ರದೇಶದಲ್ಲಿ ಶೇ 71.31 ಫಲಿತಾಂಶ ಬಂದಿದೆ. 3,876ರ ವಿದ್ಯಾರ್ಥಿಗಳ ಪೈಕಿ 2,764 ಮಂದಿ ತೇರ್ಗಡೆಯಾಗಿದ್ದಾರೆ. ಗ್ರಾಮೀಣ ಪ್ರದೇಶದ 1,810 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 1,176 ಮಂದಿ ಉತ್ತೀರ್ಣರಾಗಿ ಶೇ 64.97 ಫಲಿತಾಂಶ ದಾಖಲಾಗಿದೆ.</p>.<p>‘ಕಳೆದ ವರ್ಷಕ್ಕೆ ಹೋಲಿಸಿದರೆ, ಈ ಬಾರಿ ಶೇಕಡವಾರು ಫಲಿತಾಂಶದಲ್ಲಿ ಕೊಂಚ ಇಳಿಕೆಯಾಗಿದೆ. ಕಲಾ ವಿಭಾಗದಲ್ಲಿ ಫಲಿತಾಂಶ ಕಡಿಮೆ ಬಂದಿದೆ’ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಿ.ಎಸ್.ಕೃಷ್ಣಮೂರ್ತಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Briefhead"><strong>ಖಾಸಗಿ, ಪುನರಾವರ್ತಿತರ ಫಲಿತಾಂಶವೂ ಕಡಿಮೆ</strong></p>.<p>ಜಿಲ್ಲೆಯಲ್ಲಿ ಖಾಸಗಿಯಾಗಿ 257 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, 57 ಮಂದಿಯಷ್ಟೇ ತೇರ್ಗಡೆಯಾಗಿದ್ದಾರೆ. ಶೇ 22.18 ಫಲಿತಾಂಶ ಬಂದಿದೆ.</p>.<p>850 ಮಂದಿ ಪುನರಾವರ್ತಿತರರು ಪರೀಕ್ಷೆ ಬರೆದಿದ್ದು, 207 ಜನ ಉತ್ತೀರ್ಣರಾಗಿದ್ದಾರೆ. ಶೇ 24.35ರಷ್ಟು ಫಲಿತಾಂಶ ಬಂದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>