ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದರಾಜು ಪ್ರತಿಕ್ರಿಯಿಸಿ, ‘ಮಗು ಅನಾಥ ಎಂದು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆಯಲು ಗ್ರಾಮಕ್ಕೆ ಧಾವಿಸಿತು. ಈ ವೇಳೆ ಮಗುವಿನ ಚಿಕ್ಕಮ್ಮ ರಮ್ಯಾ, ಮಗುವನ್ನು ತಮಗೆ ನೀಡಲು ನಿರಾಕರಿಸಿ, ತಾವೇ ಸಾಕುವುದಾಗಿ ಹೇಳಿದರು. ಬಾಲ ನ್ಯಾಯ ಕಾಯಿದೆ 2015ರ ಪ್ರಕಾರ ರಕ್ತಸಂಬಂಧಿಗಳು ಮಗುವನ್ನು ದತ್ತು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಅಧಿಕೃತವಾಗಿ ಅವರಿಗೆ ಮಗುವನ್ನು ದತ್ತು ನೀಡಲಾಯಿತು’ ಎಂದು ಹೇಳಿದರು.