<p><strong>ಚಾಮರಾಜನಗರ: </strong>ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೋವಿಡ್ನಿಂದ ಮೃತಪಟ್ಟ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿಯ 5 ವರ್ಷದ ಪುತ್ರಿಯನ್ನು, ರಶ್ಮಿ ಅವರ ತಂಗಿ ರಮ್ಯಾ ದತ್ತು ತೆಗೆದುಕೊಂಡಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮ್ಯಾ ಅವರ ಪತಿ ಮಹದೇವಸ್ವಾಮಿ (ಗುರು), ‘ಸರಕು ಸಾಗಣೆ ಆಟೊ ಚಾಲಕನಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಮೃತಪಡುವುದಕ್ಕೆ ಕೆಲವು ನಿಮಿಷಗಳ ಮುಂಚೆ, ರಶ್ಮಿ ಅವರು ನನ್ನ ಪತ್ನಿ ಬಳಿ ತನ್ನ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದರು. ನನ್ನ ಪತ್ನಿ ಸದ್ಯ ಗರ್ಭಿಣಿಯಾಗಿದ್ದಾರೆ. ಈಗ ನಾವು ಮಗುವನ್ನು ನೋಡಿಕೊಳ್ಳಲು ನಿರ್ಧರಿಸಿದೆವು’ ಎಂದು ಹೇಳಿದರು.</p>.<p>‘ಗುರುಪ್ರಸಾದ್ ಅವರೂ ಸರಕು ಸಾಗಣೆ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರೂ ನಮ್ಮ ಹಾಗೇ ಬಡವರೇ. ಬಡತನ ಇದ್ದರೂ ಮಗು ಸಾಕುವುದು ಕಷ್ಟವಾಗುವುದಿಲ್ಲ ಎಂದು ತಿಳಿದು ದತ್ತು ತೆಗೆದುಕೊಂಡೆವು’ ಎಂದು ಅವರು<br />ತಿಳಿಸಿದರು.</p>.<p>ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದರಾಜು ಪ್ರತಿಕ್ರಿಯಿಸಿ, ‘ಮಗು ಅನಾಥ ಎಂದು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆಯಲು ಗ್ರಾಮಕ್ಕೆ ಧಾವಿಸಿತು. ಈ ವೇಳೆ ಮಗುವಿನ ಚಿಕ್ಕಮ್ಮ ರಮ್ಯಾ, ಮಗುವನ್ನು ತಮಗೆ ನೀಡಲು ನಿರಾಕರಿಸಿ, ತಾವೇ ಸಾಕುವುದಾಗಿ ಹೇಳಿದರು. ಬಾಲ ನ್ಯಾಯ ಕಾಯಿದೆ 2015ರ ಪ್ರಕಾರ ರಕ್ತಸಂಬಂಧಿಗಳು ಮಗುವನ್ನು ದತ್ತು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಅಧಿಕೃತವಾಗಿ ಅವರಿಗೆ ಮಗುವನ್ನು ದತ್ತು ನೀಡಲಾಯಿತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ತಾಲ್ಲೂಕಿನ ಕೊತ್ತಲವಾಡಿ ಗ್ರಾಮದಲ್ಲಿ ಕೋವಿಡ್ನಿಂದ ಮೃತಪಟ್ಟ ಗುರುಪ್ರಸಾದ್ ಹಾಗೂ ರಶ್ಮಿ ದಂಪತಿಯ 5 ವರ್ಷದ ಪುತ್ರಿಯನ್ನು, ರಶ್ಮಿ ಅವರ ತಂಗಿ ರಮ್ಯಾ ದತ್ತು ತೆಗೆದುಕೊಂಡಿದ್ದಾರೆ.</p>.<p>ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ರಮ್ಯಾ ಅವರ ಪತಿ ಮಹದೇವಸ್ವಾಮಿ (ಗುರು), ‘ಸರಕು ಸಾಗಣೆ ಆಟೊ ಚಾಲಕನಾಗಿ ಹಾಗೂ ಕೂಲಿ ಕೆಲಸ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದೇನೆ. ಮೃತಪಡುವುದಕ್ಕೆ ಕೆಲವು ನಿಮಿಷಗಳ ಮುಂಚೆ, ರಶ್ಮಿ ಅವರು ನನ್ನ ಪತ್ನಿ ಬಳಿ ತನ್ನ ಮಗುವನ್ನು ನೋಡಿಕೊಳ್ಳುವಂತೆ ಹೇಳಿದ್ದರು. ನನ್ನ ಪತ್ನಿ ಸದ್ಯ ಗರ್ಭಿಣಿಯಾಗಿದ್ದಾರೆ. ಈಗ ನಾವು ಮಗುವನ್ನು ನೋಡಿಕೊಳ್ಳಲು ನಿರ್ಧರಿಸಿದೆವು’ ಎಂದು ಹೇಳಿದರು.</p>.<p>‘ಗುರುಪ್ರಸಾದ್ ಅವರೂ ಸರಕು ಸಾಗಣೆ ಆಟೊ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರೂ ನಮ್ಮ ಹಾಗೇ ಬಡವರೇ. ಬಡತನ ಇದ್ದರೂ ಮಗು ಸಾಕುವುದು ಕಷ್ಟವಾಗುವುದಿಲ್ಲ ಎಂದು ತಿಳಿದು ದತ್ತು ತೆಗೆದುಕೊಂಡೆವು’ ಎಂದು ಅವರು<br />ತಿಳಿಸಿದರು.</p>.<p>ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಗೋವಿಂದರಾಜು ಪ್ರತಿಕ್ರಿಯಿಸಿ, ‘ಮಗು ಅನಾಥ ಎಂದು ಮಕ್ಕಳ ಕಲ್ಯಾಣ ಸಮಿತಿಯು ತನ್ನ ವಶಕ್ಕೆ ಪಡೆಯಲು ಗ್ರಾಮಕ್ಕೆ ಧಾವಿಸಿತು. ಈ ವೇಳೆ ಮಗುವಿನ ಚಿಕ್ಕಮ್ಮ ರಮ್ಯಾ, ಮಗುವನ್ನು ತಮಗೆ ನೀಡಲು ನಿರಾಕರಿಸಿ, ತಾವೇ ಸಾಕುವುದಾಗಿ ಹೇಳಿದರು. ಬಾಲ ನ್ಯಾಯ ಕಾಯಿದೆ 2015ರ ಪ್ರಕಾರ ರಕ್ತಸಂಬಂಧಿಗಳು ಮಗುವನ್ನು ದತ್ತು ಪಡೆಯಲು ಅರ್ಹರಾಗಿದ್ದಾರೆ. ಹೀಗಾಗಿ, ಅಧಿಕೃತವಾಗಿ ಅವರಿಗೆ ಮಗುವನ್ನು ದತ್ತು ನೀಡಲಾಯಿತು’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>