<p><strong>ಗುಂಡ್ಲುಪೇಟೆ: </strong>ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದಿಗ್ಬಂಧನ ಹೇರಿದ ನಂತರ ತಾಲ್ಲೂಕಿನಾದ್ಯಂತ ಖಾಸಗಿ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ಗಳನ್ನು ತೆರೆದು ಆರೋಗ್ಯ ಸೇವೆ ಒದಗಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಜನಸಾಮಾನ್ಯರಿಗೆ ಸೇವೆ ಲಭ್ಯವಾಗುತ್ತಿಲ್ಲ.</p>.<p>ಸಾಮಾನ್ಯ ಜ್ವರ, ಕೆಮ್ಮು, ರಕ್ತದೊತ್ತಡ, ಗಾಯ ಸೇರಿದಂತೆ ಇತರೆ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗಿದೆ. ತಾಲ್ಲೂಕಿನಲ್ಲಿ 20 ಖಾಸಗಿ ಕ್ಲಿನಿಕ್ಗಳಿವೆ.</p>.<p>‘ಯಾವಾಗಲೂ ಕ್ಲಿನಿಕ್ಗಳನ್ನು ತೆರೆಯುವ ವೈದ್ಯರು ಈಗ ಯಾಕೆ ತೆರೆಯುತ್ತಿಲ್ಲ? ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೇವೆ ನೀಡಬೇಕಾಗಿತ್ತು. ಕ್ಲಿನಿಕ್ಗಳು ಮುಚ್ಚಿರುತ್ತವೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗದ ಜನರು, ಸಾಮಾನ್ಯ ಕಾಯಿಲೆ ಹೊಂದಿರುವವರು ಆಸ್ಪತ್ರೆಗೆ ಬರುತ್ತಿಲ್ಲ’ ಎಂದುಬೀಮನಭೀಡು ಗ್ರಾಮದ ಮಂಜುನಾಥ್ ಹೇಳಿದರು.</p>.<p>‘ಸರ್ಕಾರಿ ವೈದ್ಯರು ಈಗ ಕೊರೊನಾ ವೈರಸ್ ನಿಯಂತ್ರಣದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.ಖಾಸಗಿ ವೈದ್ಯರು ಇಂತಹ ಕಠಿಣವಾದ ಸಮಯದಲ್ಲಿ ಸೇವೆ ನೀಡಿದರೆ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. 20 ಕ್ಲಿನಿಕ್ಗಳಿದ್ದರೂ ಯಾರೊಬ್ಬರೂ ತೆರೆಯದಿರುವುದು ಸೇವೆಗೆ ಮಾಡುತ್ತಿರುವ ಅವಮಾನ’ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ದಿಗ್ಬಂಧನ ಇರುವುದರಿಂದ ಬರುವುದಕ್ಕೆ ತೊಂದರೆಯಾಗುತ್ತಿದೆ. ರೋಗಿಗಳೂ ಬರುತ್ತಿಲ್ಲ ಎಂದು ಕ್ಲಿನಿಕ್ ತೆರೆದಿಲ್ಲ. ತಾಲ್ಲೂಕಿಗೆ ಕೇರಳದ ನಂಟು ಹೆಚ್ಚಿರುವುದರಿಂದ ರೋಗಿಗಳಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಇದ್ದರೆ, ಅದು ವೈದ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೂ ಕೆಲವರು ಕ್ಲಿನಿಕ್ ತೆರೆಯಲು ಹಿಂದೇಟು ಹಾಕಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಗಳು ಬಿದ್ದು ಗಾಯಗೊಂಡಿದ್ದಾಳೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಜನರಿದ್ದರು. ಖಾಸಗಿ ಕ್ಲಿನಿಕ್ಗೆ ತೋರಿಸೋಣ ಎಂದರೆ ಎಲ್ಲ ಬಂದ್ ಆಗಿವೆ’ ಎಂದು ಪಟ್ಟಣದ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>***</p>.<p>ಎಲ್ಲಾ ಕ್ಲಿನಿಕ್ ತೆರೆಯುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳುತ್ತೇನೆ.</p>.<p><em><strong>- ನಂಜುಂಡಯ್ಯ, ತಹಶೀಲ್ದಾರ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ: </strong>ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ದಿಗ್ಬಂಧನ ಹೇರಿದ ನಂತರ ತಾಲ್ಲೂಕಿನಾದ್ಯಂತ ಖಾಸಗಿ ಕ್ಲಿನಿಕ್ಗಳು ಕಾರ್ಯನಿರ್ವಹಿಸುತ್ತಿಲ್ಲ. ಖಾಸಗಿ ವೈದ್ಯರು ತಮ್ಮ ಕ್ಲಿನಿಕ್ಗಳನ್ನು ತೆರೆದು ಆರೋಗ್ಯ ಸೇವೆ ಒದಗಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದ್ದರೂ, ಜನಸಾಮಾನ್ಯರಿಗೆ ಸೇವೆ ಲಭ್ಯವಾಗುತ್ತಿಲ್ಲ.</p>.<p>ಸಾಮಾನ್ಯ ಜ್ವರ, ಕೆಮ್ಮು, ರಕ್ತದೊತ್ತಡ, ಗಾಯ ಸೇರಿದಂತೆ ಇತರೆ ಕಾಯಿಲೆಗಳಿಗೆ ಸರಿಯಾದ ಚಿಕಿತ್ಸೆ ಸಿಗದಿರುವುದರಿಂದ ಜನರು ತೊಂದರೆಗೆ ಒಳಗಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಜನರಿಗೆ ಕಷ್ಟವಾಗಿದೆ. ತಾಲ್ಲೂಕಿನಲ್ಲಿ 20 ಖಾಸಗಿ ಕ್ಲಿನಿಕ್ಗಳಿವೆ.</p>.<p>‘ಯಾವಾಗಲೂ ಕ್ಲಿನಿಕ್ಗಳನ್ನು ತೆರೆಯುವ ವೈದ್ಯರು ಈಗ ಯಾಕೆ ತೆರೆಯುತ್ತಿಲ್ಲ? ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸೇವೆ ನೀಡಬೇಕಾಗಿತ್ತು. ಕ್ಲಿನಿಕ್ಗಳು ಮುಚ್ಚಿರುತ್ತವೆ ಎಂಬ ಕಾರಣಕ್ಕೆ ಗ್ರಾಮೀಣ ಭಾಗದ ಜನರು, ಸಾಮಾನ್ಯ ಕಾಯಿಲೆ ಹೊಂದಿರುವವರು ಆಸ್ಪತ್ರೆಗೆ ಬರುತ್ತಿಲ್ಲ’ ಎಂದುಬೀಮನಭೀಡು ಗ್ರಾಮದ ಮಂಜುನಾಥ್ ಹೇಳಿದರು.</p>.<p>‘ಸರ್ಕಾರಿ ವೈದ್ಯರು ಈಗ ಕೊರೊನಾ ವೈರಸ್ ನಿಯಂತ್ರಣದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ.ಖಾಸಗಿ ವೈದ್ಯರು ಇಂತಹ ಕಠಿಣವಾದ ಸಮಯದಲ್ಲಿ ಸೇವೆ ನೀಡಿದರೆ ಜನರ ಮನಸ್ಸಿನಲ್ಲಿ ಉಳಿಯುತ್ತಾರೆ. 20 ಕ್ಲಿನಿಕ್ಗಳಿದ್ದರೂ ಯಾರೊಬ್ಬರೂ ತೆರೆಯದಿರುವುದು ಸೇವೆಗೆ ಮಾಡುತ್ತಿರುವ ಅವಮಾನ’ ಎಂದು ಹಿರಿಯ ನಾಗರಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.</p>.<p>‘ದಿಗ್ಬಂಧನ ಇರುವುದರಿಂದ ಬರುವುದಕ್ಕೆ ತೊಂದರೆಯಾಗುತ್ತಿದೆ. ರೋಗಿಗಳೂ ಬರುತ್ತಿಲ್ಲ ಎಂದು ಕ್ಲಿನಿಕ್ ತೆರೆದಿಲ್ಲ. ತಾಲ್ಲೂಕಿಗೆ ಕೇರಳದ ನಂಟು ಹೆಚ್ಚಿರುವುದರಿಂದ ರೋಗಿಗಳಲ್ಲಿ ಕೊರೊನಾ ಸೋಂಕಿನ ಗುಣಲಕ್ಷಣಗಳು ಇದ್ದರೆ, ಅದು ವೈದ್ಯರಿಗೂ ಹರಡುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೂ ಕೆಲವರು ಕ್ಲಿನಿಕ್ ತೆರೆಯಲು ಹಿಂದೇಟು ಹಾಕಿದ್ದಾರೆ’ ಎಂದು ಹೆಸರು ಹೇಳಲು ಇಚ್ಛಿಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಮಗಳು ಬಿದ್ದು ಗಾಯಗೊಂಡಿದ್ದಾಳೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಜನರಿದ್ದರು. ಖಾಸಗಿ ಕ್ಲಿನಿಕ್ಗೆ ತೋರಿಸೋಣ ಎಂದರೆ ಎಲ್ಲ ಬಂದ್ ಆಗಿವೆ’ ಎಂದು ಪಟ್ಟಣದ ಲೋಕೇಶ್ ಅಸಮಾಧಾನ ವ್ಯಕ್ತಪಡಿಸಿದರು.</p>.<p>***</p>.<p>ಎಲ್ಲಾ ಕ್ಲಿನಿಕ್ ತೆರೆಯುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ತಾಲ್ಲೂಕು ಆರೋಗ್ಯ ಅಧಿಕಾರಿಯಿಂದ ಮಾಹಿತಿ ಪಡೆದುಕೊಳ್ಳುತ್ತೇನೆ.</p>.<p><em><strong>- ನಂಜುಂಡಯ್ಯ, ತಹಶೀಲ್ದಾರ್</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>