<p><strong>ಚಾಮರಾಜನಗರ</strong>: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ.</p>.<p>ವಾರದಿಂದೀಚೆಗೆ ತಾಲ್ಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಗುಡಿಸಲುಗಳಿಗೆ ಹಾನಿ ಸಂಭವಿಸಿದೆ.</p>.<p>ಶನಿವಾರ ರಾತ್ರಿ ತಾಲ್ಲೂಕಿನ ಹೊಂಡರಬಾಳು, ನಲ್ಲೂರು, ಹರದನಹಳ್ಳಿ, ವೆಂಕಟಯ್ಯನ ಛತ್ರ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಬೆಳೆದಿರುವ ಬೆಳೆ ನಷ್ಟವಾಗಿದೆ. ಬಾಳೆ, ತೆಂಗಿನ ಮರಗಳು ಧರೆಗುಳಿದಿವೆ. ಕಬ್ಬಿನ ಬೆಳೆ ನೆಲಕ್ಕೆ ಬಾಗಿದೆ.</p>.<p>ಹೊಂಡರಬಾಳು, ನಲ್ಲೂರು ಭಾಗದಲ್ಲಿ ನಾಲ್ವರು ರೈತರ ಎಂಟು ಎಕರೆಗೂ ಹೆಚ್ಚು ಜಾಗದಲ್ಲಿ ಬೆಳೆದಿದ್ದ ಬಾಳೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬಾಳೆ ಚೆನ್ನಾಗಿ ಬಂದಿತ್ತು. ಶನಿವಾರ ರಾತ್ರಿ ಬೀಸಿದ ಗಾಳಿಗೆ ನೆಲಕಚ್ಚಿವೆ ಎಂದು ರೈತರು ಮಾಹಿತಿ ನೀಡಿದರು.</p>.<p>ತಾಲ್ಲೂಕಿನ ಬೇವಿನತಾಳಪುರ, ಬಂದೀಗೌಡನಹಳ್ಳಿ, ಹರದನಹಳ್ಳಿ, ವೆಂಕಟಯ್ಯನಛತ್ರ, ತಾವರಕಟ್ಟೆಮೋಳೆಗಳಲ್ಲೂ ಬೆಳೆ ಹಾನಿ ಸಂಭವಿಸಿದೆ. ತೆಂಗು, ಹೆಬ್ಬೇವು ಸೇರಿದಂತೆ ಹಲವು ಮರಗಳು ನೆಲಕ್ಕುರುಳಿವೆ. </p>.<p>ಬೇವಿನತಾಳಪುರದ ರೈತ ಚನ್ನಂಜಶೆಟ್ಟಿ ಅವರಿಗೆ ಸೇರಿದ ಗುಡಿಸಲು ಹಾಗೂ ಶೀಟು ಮನೆ ಕುಸಿದಿದ್ದು, ಕುರಿಯೊಂದು ಮೃತಪಟ್ಟಿದೆ. ಅದೇ ಗ್ರಾಮದ ಗುರುಸ್ವಾಮಿ ಎಂಬುವವರು ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ನೆಲಕ್ಕೆ ಬಾಗಿದೆ.</p>.<p>ತಾಲ್ಲೂಕು ಆಡಳಿತವು ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<p class="Subhead">ಯಳಂದೂರು ವರದಿ: ಯಳಂದೂರು ತಾಲ್ಲೂಕಿನಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ನಿವಾಸಿ ಮಾದಯ್ಯ ಅವರ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಶನಿವಾರ ರಾತ್ರಿ ಸುರಿದ ಗಾಳಿ ಸಹಿತ ಭಾರಿ ಮಳೆಗೆ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಬೆಳೆ ಹಾನಿ ಸಂಭವಿಸಿದೆ.</p>.<p>ವಾರದಿಂದೀಚೆಗೆ ತಾಲ್ಲೂಕಿನಾದ್ಯಂತ ಗಾಳಿ ಸಹಿತ ಮಳೆಯಾಗುತ್ತಿದ್ದು, ಕೆಲವು ಕಡೆಗಳಲ್ಲಿ ಗುಡಿಸಲುಗಳಿಗೆ ಹಾನಿ ಸಂಭವಿಸಿದೆ.</p>.<p>ಶನಿವಾರ ರಾತ್ರಿ ತಾಲ್ಲೂಕಿನ ಹೊಂಡರಬಾಳು, ನಲ್ಲೂರು, ಹರದನಹಳ್ಳಿ, ವೆಂಕಟಯ್ಯನ ಛತ್ರ ಸೇರಿದಂತೆ ಹಲವು ಕಡೆಗಳಲ್ಲಿ ರೈತರು ಬೆಳೆದಿರುವ ಬೆಳೆ ನಷ್ಟವಾಗಿದೆ. ಬಾಳೆ, ತೆಂಗಿನ ಮರಗಳು ಧರೆಗುಳಿದಿವೆ. ಕಬ್ಬಿನ ಬೆಳೆ ನೆಲಕ್ಕೆ ಬಾಗಿದೆ.</p>.<p>ಹೊಂಡರಬಾಳು, ನಲ್ಲೂರು ಭಾಗದಲ್ಲಿ ನಾಲ್ವರು ರೈತರ ಎಂಟು ಎಕರೆಗೂ ಹೆಚ್ಚು ಜಾಗದಲ್ಲಿ ಬೆಳೆದಿದ್ದ ಬಾಳೆ ನೆಲಕ್ಕುರುಳಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬಾಳೆ ಚೆನ್ನಾಗಿ ಬಂದಿತ್ತು. ಶನಿವಾರ ರಾತ್ರಿ ಬೀಸಿದ ಗಾಳಿಗೆ ನೆಲಕಚ್ಚಿವೆ ಎಂದು ರೈತರು ಮಾಹಿತಿ ನೀಡಿದರು.</p>.<p>ತಾಲ್ಲೂಕಿನ ಬೇವಿನತಾಳಪುರ, ಬಂದೀಗೌಡನಹಳ್ಳಿ, ಹರದನಹಳ್ಳಿ, ವೆಂಕಟಯ್ಯನಛತ್ರ, ತಾವರಕಟ್ಟೆಮೋಳೆಗಳಲ್ಲೂ ಬೆಳೆ ಹಾನಿ ಸಂಭವಿಸಿದೆ. ತೆಂಗು, ಹೆಬ್ಬೇವು ಸೇರಿದಂತೆ ಹಲವು ಮರಗಳು ನೆಲಕ್ಕುರುಳಿವೆ. </p>.<p>ಬೇವಿನತಾಳಪುರದ ರೈತ ಚನ್ನಂಜಶೆಟ್ಟಿ ಅವರಿಗೆ ಸೇರಿದ ಗುಡಿಸಲು ಹಾಗೂ ಶೀಟು ಮನೆ ಕುಸಿದಿದ್ದು, ಕುರಿಯೊಂದು ಮೃತಪಟ್ಟಿದೆ. ಅದೇ ಗ್ರಾಮದ ಗುರುಸ್ವಾಮಿ ಎಂಬುವವರು ಐದು ಎಕರೆಯಲ್ಲಿ ಬೆಳೆದಿದ್ದ ಕಬ್ಬು ನೆಲಕ್ಕೆ ಬಾಗಿದೆ.</p>.<p>ತಾಲ್ಲೂಕು ಆಡಳಿತವು ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.</p>.<p class="Subhead">ಯಳಂದೂರು ವರದಿ: ಯಳಂದೂರು ತಾಲ್ಲೂಕಿನಬಿಳಿಗಿರಿರಂಗನಬೆಟ್ಟದ ಯರಕನಗದ್ದೆ ನಿವಾಸಿ ಮಾದಯ್ಯ ಅವರ ಮನೆಗೆ ಮಳೆಯಿಂದಾಗಿ ಹಾನಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>