ಮಹದೇಶ್ವರ ಬೆಟ್ಟ (ಚಾಮರಾಜನಗರ): ಸ್ವಗ್ರಾಮ ಕಾರಜೋಳದಲ್ಲಿ, ಜನರು ತಮಗೆ ತೊಡಿಸಿದ ಚಿನ್ನದ ಕಿರೀಟವನ್ನು ಸರ್ಕಾರಕ್ಕೆ ನೀಡಿದ್ದಾಗಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಇಲ್ಲಿ ಹೇಳಿದರು.
ಬೆಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನನ್ನ ಊರಿನ ಜನರು ಹಟ ಮಾಡಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿದ್ದರು. ಬಂಗಾರದ ಕಿರೀಟ ಹಾಕುತ್ತಾರೆ ಎಂದು ಗೊತ್ತಿರಲಿಲ್ಲ. ನಾನು ಬೇಡ ಅಂದರೂ ಎಲ್ಲರೂ ವೇದಿಕೆಗೆ ಬಂದು ಕಿರೀಟ ತೊಡಿಸಿದರು’ ಎಂದರು.
‘ನಾನೊಬ್ಬ ಸಮಾಜ ಸೇವಕ, ಸಮಾಜದ ಕಾರ್ಯಕರ್ತ. ಸರ್ಕಾರದ ಅಧಿಕಾರ ಉಪಯೋಗ ಮಾಡಿಕೊಂಡು ಊರಿನ ಅಭಿವೃದ್ಧಿ ಮಾಡಿದ್ದೇನೆ. ಅದು ಜನರಿಗೆ ಸಲ್ಲಬೇಕಾದ ಗೌರವವೇ ವಿನಾ ನನಗಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.