ಪುಷ್ಪಲತಾ ಅವರು ಇಬ್ಬರು ಮಕ್ಕಳೊಡನೆ ದೀಪದಗಿರಿ ಒಡ್ಡುವಿಗೆ ತೆರಳುತ್ತಿದ್ದರು. ಬೀದಿ ದೀಪ ಇಲ್ಲದಿರುವುದರಿಂದ ಕಲ್ಲು ತಡೆದು ಬಿದ್ದಾಗ ಕಲ್ಲಿಗೆ ತಲೆ ತಾಗಿದ್ದರಿಂದ ತೀವ್ರ ಪೆಟ್ಟಾಗಿದ್ದು, ಜೊತೆಯಲ್ಲಿದ್ದ ಭಕ್ತರು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳದಲ್ಲಿ ಪ್ರಜ್ಞೆ ತಪ್ಪಿದ ಮಹಿಳೆಗೆ, ಭಾನುವಾರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.