‘ಸುಪ್ರೀಂಕೋರ್ಟ್ ತೀರ್ಪು, ದೇಶದ ರೈತ ಸಂಘಟನೆಗಳ ಮುಂದಿನ ಹೋರಾಟದ ರೂಪುರೇಷೆಗಳು ಹಾಗೂ ಕೇಂದ್ರ, ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಸುಗ್ರೀವಾಜ್ಞೆಯ ಕಾಯ್ದೆಗಳ ಬಗ್ಗೆ ಇದೇ 16ರಂದು ಬೆಂಗಳೂರಿನ ಕೊಂಡೋಜಿ ಬಸಪ್ಪ ಸಭಾಂಗಣದಲ್ಲಿ ಮುಕ್ತ ಸಂವಾದ ನಡೆಯಲಿದೆ. ರಾಷ್ಟ್ರಮಟ್ಟದ ಹೋರಾಟ ನಿರತ ರೈತ ಮುಖಂಡರಾದ ಯೋಗೇಂದ್ರ ಯಾದವ್, ಯದುವೀರ್ಸಿಂಗ್, ಬಿಜು, ಐಯ್ಯಕಣ್ಣನ್ ಸೇರಿದಂತೆ ಇತರರು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.