<p><strong>ಚಾಮರಾಜನಗರ: </strong>ಗಣೇಶ ಚತುರ್ಥಿಗೆ ಕೆಲವೇದಿನಗಳು ಬಾಕಿ ಇರುವಂತೆಯೇ ಹೂವಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.</p>.<p>ನಗರದ ಸಮೀಪದ ಚೆನ್ನೀಪುರದಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯೂ ದುಪ್ಪಟ್ಟಾಗಿದೆ. ₹300–₹400ರಷ್ಟಿದ್ದ ಕೆಜಿ ಕನಕಾಂಬರದ ಬೆಲೆ ₹600 ಆಗಿದೆ. ಮರ್ಲೆ, ಕಾಕಡದ ಬೆಲೆ ₹ 200ಕ್ಕೆ ಏರಿದೆ. ಕಳೆದ ವಾರ ₹80 ಇತ್ತು. ₹40 ಇದ್ದ ಸೇವಂತಿಗೆ ಬೆಲೆ ಈ ಬಾರ ₹80ಕ್ಕೆ ಏರಿದೆ. ಸುಗಂಧರಾಜ ಹೂವಿಗೆ ₹120 ಇದೆ.</p>.<p>‘ಹೂವುಗಳಿಗೆ ಕಳೆದ ವಾರಕ್ಕಿಂತ ಸ್ವಲ್ಪ ಹೆಚ್ಚಿನ ಬೇಡಿಕೆ ಇದೆ. ಗಣೇಶನ ಹಬ್ಬಕ್ಕೆ ಬೇಡಿಕೆ ಇನ್ನಷ್ಟು ಜಾಸ್ತಿಯಾಗಲಿದ್ದು, ಬೆಲೆಯೂ ಏರಿಕೆ ಕಾಣಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ಹೆಚ್ಚಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ.</p>.<p>ಹಾಪ್ಕಾಮ್ಸ್ನಲ್ಲಿ ಕಳೆದವಾರ ಬೀನ್ಸ್ಗೆ ಕೆಜಿಗೆ ₹40 ಇತ್ತು. ಈ ವಾರ ₹50ಕ್ಕೆ ಏರಿದೆ. ಅದೇ ರೀತಿ ₹30 ಇದ್ದ ಕ್ಯಾರೆಟ್ ಬೆಲೆ ₹40ಕ್ಕೆ ಏರಿದೆ.</p>.<p>‘ಮಳೆ ವಾತಾವರಣ ಇರುವುದರಿಂದ ಬೀನ್ಸ್ ಹಾಗೂ ಕ್ಯಾರೆಟ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಈ ಕಾರಣದಿಂದ ಬೆಲೆ ಹೆಚ್ಚಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ಮಾಹಿತಿ ನೀಡಿದರು.</p>.<p>ಉಳಿದಂತೆ ಟೊಮೆಟೊ (₹20), ಆಲೂಗಡ್ಡೆ (₹25), ಈರುಳ್ಳಿ (₹30), ಮೂಲಂಗಿ (₹20) ಹಾಗೂ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಪೈಕಿ ಸೇಬು (₹100–₹120), ಮೂಸಂಬಿ (₹60), ಕಿತ್ತಳೆ (₹80), ದ್ರಾಕ್ಷಿ, ದಾಳಿಂಬೆ (₹120) ಬೆಲೆ ಸ್ಥಿರವಾಗಿದೆ.</p>.<p>ಮಾಂಸ ಮಾರುಕಟ್ಟೆಯಲ್ಲಿ ಮಟನ್ ಬೆಲೆ ಬದಲಾಗಿಲ್ಲ. ಚಿಕನ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.</p>.<p>ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ಚಿಕನ್ಗೆಕಳೆದ ವಾರ ₹200–₹220ರವರೆಗೆ ಬೆಲೆ ಇತ್ತು. ಈ ವಾರ ₹180–₹200ಕ್ಕೆ ವ್ಯಾಪಾರಿಗಳು ಮಾರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಗಣೇಶ ಚತುರ್ಥಿಗೆ ಕೆಲವೇದಿನಗಳು ಬಾಕಿ ಇರುವಂತೆಯೇ ಹೂವಿನ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ. ಹಬ್ಬದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.</p>.<p>ನಗರದ ಸಮೀಪದ ಚೆನ್ನೀಪುರದಮೋಳೆಯಲ್ಲಿರುವ ಬಿಡಿ ಹೂವಿನ ಮಾರುಕಟ್ಟೆಯಲ್ಲಿ, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಎಲ್ಲ ಹೂವುಗಳ ಬೆಲೆಯೂ ದುಪ್ಪಟ್ಟಾಗಿದೆ. ₹300–₹400ರಷ್ಟಿದ್ದ ಕೆಜಿ ಕನಕಾಂಬರದ ಬೆಲೆ ₹600 ಆಗಿದೆ. ಮರ್ಲೆ, ಕಾಕಡದ ಬೆಲೆ ₹ 200ಕ್ಕೆ ಏರಿದೆ. ಕಳೆದ ವಾರ ₹80 ಇತ್ತು. ₹40 ಇದ್ದ ಸೇವಂತಿಗೆ ಬೆಲೆ ಈ ಬಾರ ₹80ಕ್ಕೆ ಏರಿದೆ. ಸುಗಂಧರಾಜ ಹೂವಿಗೆ ₹120 ಇದೆ.</p>.<p>‘ಹೂವುಗಳಿಗೆ ಕಳೆದ ವಾರಕ್ಕಿಂತ ಸ್ವಲ್ಪ ಹೆಚ್ಚಿನ ಬೇಡಿಕೆ ಇದೆ. ಗಣೇಶನ ಹಬ್ಬಕ್ಕೆ ಬೇಡಿಕೆ ಇನ್ನಷ್ಟು ಜಾಸ್ತಿಯಾಗಲಿದ್ದು, ಬೆಲೆಯೂ ಏರಿಕೆ ಕಾಣಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಹಾಗೂ ಕ್ಯಾರೆಟ್ ಬೆಲೆ ಹೆಚ್ಚಾಗಿದೆ. ಉಳಿದ ತರಕಾರಿಗಳ ಬೆಲೆಯಲ್ಲಿ ಬದಲಾವಣೆ ಕಂಡು ಬಂದಿಲ್ಲ.</p>.<p>ಹಾಪ್ಕಾಮ್ಸ್ನಲ್ಲಿ ಕಳೆದವಾರ ಬೀನ್ಸ್ಗೆ ಕೆಜಿಗೆ ₹40 ಇತ್ತು. ಈ ವಾರ ₹50ಕ್ಕೆ ಏರಿದೆ. ಅದೇ ರೀತಿ ₹30 ಇದ್ದ ಕ್ಯಾರೆಟ್ ಬೆಲೆ ₹40ಕ್ಕೆ ಏರಿದೆ.</p>.<p>‘ಮಳೆ ವಾತಾವರಣ ಇರುವುದರಿಂದ ಬೀನ್ಸ್ ಹಾಗೂ ಕ್ಯಾರೆಟ್ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಈ ಕಾರಣದಿಂದ ಬೆಲೆ ಹೆಚ್ಚಾಗಿದೆ’ ಎಂದು ಹಾಪ್ಕಾಮ್ಸ್ ವ್ಯಾಪಾರಿ ಮಧು ಅವರು ಮಾಹಿತಿ ನೀಡಿದರು.</p>.<p>ಉಳಿದಂತೆ ಟೊಮೆಟೊ (₹20), ಆಲೂಗಡ್ಡೆ (₹25), ಈರುಳ್ಳಿ (₹30), ಮೂಲಂಗಿ (₹20) ಹಾಗೂ ಇತರ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.</p>.<p>ಹಣ್ಣುಗಳ ಪೈಕಿ ಸೇಬು (₹100–₹120), ಮೂಸಂಬಿ (₹60), ಕಿತ್ತಳೆ (₹80), ದ್ರಾಕ್ಷಿ, ದಾಳಿಂಬೆ (₹120) ಬೆಲೆ ಸ್ಥಿರವಾಗಿದೆ.</p>.<p>ಮಾಂಸ ಮಾರುಕಟ್ಟೆಯಲ್ಲಿ ಮಟನ್ ಬೆಲೆ ಬದಲಾಗಿಲ್ಲ. ಚಿಕನ್ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ.</p>.<p>ಚಿಲ್ಲರೆ ಮಾರುಕಟ್ಟೆಯಲ್ಲಿ ಕೆಜಿಗೆ ಚಿಕನ್ಗೆಕಳೆದ ವಾರ ₹200–₹220ರವರೆಗೆ ಬೆಲೆ ಇತ್ತು. ಈ ವಾರ ₹180–₹200ಕ್ಕೆ ವ್ಯಾಪಾರಿಗಳು ಮಾರುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>