<p><strong>ಹನೂರು</strong>: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಎಂದು ರಾಮಾಪುರ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಮಹದೇವ್ ಪ್ರಸಾದ್ ತಿಳಿಸಿದರು.</p>.<p>ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಹಾಗಾಗಿ ಶಿಕ್ಷಕರು ಕ್ರಿಯಾಶೀಲತೆಗೆ ಬಳಸಿಕೊಂಡು ಆಹಾರ ಮೇಳ, ವಿಜ್ಞಾನ ಮೇಳ ಆಯೋಜಸಿ, ಸಮುದಾಯದವರನ್ನು ಶಾಲೆಯತ್ತ ಕರೆತರ ಬಹುದಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.</p>.<p> ಮುಖ್ಯ ಶಿಕ್ಷಕ ಮಹಾದೇವ ಮಾತನಾಡಿ, ಮಕ್ಕಳಿಗೆ ಆಹಾರ ತಿನಿಸುಗಳ ಮಹತ್, ವ್ಯಾವಹಾರಿಕ ಜ್ಞಾನ ಮೂಡಿಸಲು, ಗ್ರಾಹಕರನ್ನು ಸೆಳೆಯುವ ಕೌಶಲ ವೃದ್ಧಿಸಲು ಅಹಾರ ಮೇಳವನ್ನು ಆಯೋಜಿಸಲಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.</p>.<p>ಇಕೋ ಕ್ಲಬ್ ಅಡಿ ಆಹಾರ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ವಿದ್ಯಾರ್ಥಿಗಳು ಕಲ್ಲಂಗಡಿ, ಪರಂಗಿ ಹಣ್ಣು, ಸಮೋಸ, ವಿವಿಧ ಹಣ್ಣುಗಳ ಜ್ಯೂಸ್, ಕೇಕ್, ಪಾನಿಪುರಿ,ಮಜ್ಜಿಗೆ, ತಿನಿಸು– ಪಾಲೀಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು.</p>.<p> ಸಹ ಶಿಕ್ಷಕರಾದ ಬಾಲು ನಾಯ್ಕ, ಸುರಭಿ, ಅತಿಥಿ ಶಿಕ್ಷಕಿ ಯಶೋದ, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್ ಮತ್ತು ಕಾಂತರಾಜು ಉಪಸ್ಥಿತರಿದ್ದರು.</p>
<p><strong>ಹನೂರು</strong>: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಎಂದು ರಾಮಾಪುರ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಮಹದೇವ್ ಪ್ರಸಾದ್ ತಿಳಿಸಿದರು.</p>.<p>ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಹಾಗಾಗಿ ಶಿಕ್ಷಕರು ಕ್ರಿಯಾಶೀಲತೆಗೆ ಬಳಸಿಕೊಂಡು ಆಹಾರ ಮೇಳ, ವಿಜ್ಞಾನ ಮೇಳ ಆಯೋಜಸಿ, ಸಮುದಾಯದವರನ್ನು ಶಾಲೆಯತ್ತ ಕರೆತರ ಬಹುದಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.</p>.<p> ಮುಖ್ಯ ಶಿಕ್ಷಕ ಮಹಾದೇವ ಮಾತನಾಡಿ, ಮಕ್ಕಳಿಗೆ ಆಹಾರ ತಿನಿಸುಗಳ ಮಹತ್, ವ್ಯಾವಹಾರಿಕ ಜ್ಞಾನ ಮೂಡಿಸಲು, ಗ್ರಾಹಕರನ್ನು ಸೆಳೆಯುವ ಕೌಶಲ ವೃದ್ಧಿಸಲು ಅಹಾರ ಮೇಳವನ್ನು ಆಯೋಜಿಸಲಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.</p>.<p>ಇಕೋ ಕ್ಲಬ್ ಅಡಿ ಆಹಾರ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ವಿದ್ಯಾರ್ಥಿಗಳು ಕಲ್ಲಂಗಡಿ, ಪರಂಗಿ ಹಣ್ಣು, ಸಮೋಸ, ವಿವಿಧ ಹಣ್ಣುಗಳ ಜ್ಯೂಸ್, ಕೇಕ್, ಪಾನಿಪುರಿ,ಮಜ್ಜಿಗೆ, ತಿನಿಸು– ಪಾಲೀಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು.</p>.<p> ಸಹ ಶಿಕ್ಷಕರಾದ ಬಾಲು ನಾಯ್ಕ, ಸುರಭಿ, ಅತಿಥಿ ಶಿಕ್ಷಕಿ ಯಶೋದ, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್ ಮತ್ತು ಕಾಂತರಾಜು ಉಪಸ್ಥಿತರಿದ್ದರು.</p>