<p><strong>ಹನೂರು</strong>: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಎಂದು ರಾಮಾಪುರ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಮಹದೇವ್ ಪ್ರಸಾದ್ ತಿಳಿಸಿದರು.</p>.<p>ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಹಾಗಾಗಿ ಶಿಕ್ಷಕರು ಕ್ರಿಯಾಶೀಲತೆಗೆ ಬಳಸಿಕೊಂಡು ಆಹಾರ ಮೇಳ, ವಿಜ್ಞಾನ ಮೇಳ ಆಯೋಜಸಿ, ಸಮುದಾಯದವರನ್ನು ಶಾಲೆಯತ್ತ ಕರೆತರ ಬಹುದಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.</p>.<p> ಮುಖ್ಯ ಶಿಕ್ಷಕ ಮಹಾದೇವ ಮಾತನಾಡಿ, ಮಕ್ಕಳಿಗೆ ಆಹಾರ ತಿನಿಸುಗಳ ಮಹತ್, ವ್ಯಾವಹಾರಿಕ ಜ್ಞಾನ ಮೂಡಿಸಲು, ಗ್ರಾಹಕರನ್ನು ಸೆಳೆಯುವ ಕೌಶಲ ವೃದ್ಧಿಸಲು ಅಹಾರ ಮೇಳವನ್ನು ಆಯೋಜಿಸಲಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.</p>.<p>ಇಕೋ ಕ್ಲಬ್ ಅಡಿ ಆಹಾರ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ವಿದ್ಯಾರ್ಥಿಗಳು ಕಲ್ಲಂಗಡಿ, ಪರಂಗಿ ಹಣ್ಣು, ಸಮೋಸ, ವಿವಿಧ ಹಣ್ಣುಗಳ ಜ್ಯೂಸ್, ಕೇಕ್, ಪಾನಿಪುರಿ,ಮಜ್ಜಿಗೆ, ತಿನಿಸು– ಪಾಲೀಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು.</p>.<p> ಸಹ ಶಿಕ್ಷಕರಾದ ಬಾಲು ನಾಯ್ಕ, ಸುರಭಿ, ಅತಿಥಿ ಶಿಕ್ಷಕಿ ಯಶೋದ, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್ ಮತ್ತು ಕಾಂತರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹನೂರು</strong>: ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿಸುವಂತೆ ವಿನೂತನ ಕಾರ್ಯಕ್ರಮಗಳನ್ನು ಮಾಡುತ್ತಿರಬೇಕು ಎಂದು ರಾಮಾಪುರ ಕ್ಲಸ್ಟರ್ ಸಂಪನ್ಮೂಲವ್ಯಕ್ತಿ ಮಹದೇವ್ ಪ್ರಸಾದ್ ತಿಳಿಸಿದರು.</p>.<p>ವಡ್ಡರ ದೊಡ್ಡಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಆಹಾರ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಸರ್ಕಾರಿ ಶಾಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ದಾಖಲಾತಿ ಕಡಿಮೆ ಆಗುತ್ತಿದೆ. ಹಾಗಾಗಿ ಶಿಕ್ಷಕರು ಕ್ರಿಯಾಶೀಲತೆಗೆ ಬಳಸಿಕೊಂಡು ಆಹಾರ ಮೇಳ, ವಿಜ್ಞಾನ ಮೇಳ ಆಯೋಜಸಿ, ಸಮುದಾಯದವರನ್ನು ಶಾಲೆಯತ್ತ ಕರೆತರ ಬಹುದಾಗಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.</p>.<p> ಮುಖ್ಯ ಶಿಕ್ಷಕ ಮಹಾದೇವ ಮಾತನಾಡಿ, ಮಕ್ಕಳಿಗೆ ಆಹಾರ ತಿನಿಸುಗಳ ಮಹತ್, ವ್ಯಾವಹಾರಿಕ ಜ್ಞಾನ ಮೂಡಿಸಲು, ಗ್ರಾಹಕರನ್ನು ಸೆಳೆಯುವ ಕೌಶಲ ವೃದ್ಧಿಸಲು ಅಹಾರ ಮೇಳವನ್ನು ಆಯೋಜಿಸಲಾಗಿದೆ. ಸಹಕರಿಸಿದ ಎಲ್ಲರಿಗೂ ಧನ್ಯವಾದ ಎಂದರು.</p>.<p>ಇಕೋ ಕ್ಲಬ್ ಅಡಿ ಆಹಾರ ಮೇಳವನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದು, ವಿದ್ಯಾರ್ಥಿಗಳು ಕಲ್ಲಂಗಡಿ, ಪರಂಗಿ ಹಣ್ಣು, ಸಮೋಸ, ವಿವಿಧ ಹಣ್ಣುಗಳ ಜ್ಯೂಸ್, ಕೇಕ್, ಪಾನಿಪುರಿ,ಮಜ್ಜಿಗೆ, ತಿನಿಸು– ಪಾಲೀಯಗಳನ್ನು ಮಾರಾಟ ಮಾಡಿ ಖುಷಿಪಟ್ಟರು.</p>.<p> ಸಹ ಶಿಕ್ಷಕರಾದ ಬಾಲು ನಾಯ್ಕ, ಸುರಭಿ, ಅತಿಥಿ ಶಿಕ್ಷಕಿ ಯಶೋದ, ಎಸ್ಡಿಎಂಸಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು, ಹೋಲಿಕ್ರಾಸ್ ಸಂಸ್ಥೆಯ ಸಂಯೋಜಕ ಸುರೇಶ್ ಮತ್ತು ಕಾಂತರಾಜು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>