<p>ಯಳಂದೂರು:‘ಪಾಲಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳಂತೆ ಕಾಣದೆ, ಮಾನವೀಯ ಮೌಲ್ಯ, ಶಿಸ್ತು, ಸಂಯಮಗಳ ಸಂಗಮವಾಗಿ ರೂಪಿಸಬೇಕಾದ ಅಗತ್ಯ ಇದೆ’ ಎಂದು ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ಮಕ್ಕಳ ಕೈಗೆ ಪುಸ್ತಕ ನೀಡಬೇಕು. ಮನೆಗೆ ಒಂದಾದರೂ ಪತ್ರಿಕೆ ತರಿಸಬೇಕು. ಕೃಷಿ ಸಂಸ್ಕೃತಿ, ಗ್ರಾಮ ಜೀವನದ ಸೊಬಗನ್ನು ಆಹ್ಲಾದಿಸುವ ಮನಸ್ಸು ರೂಪಿಸಬೇಕು. ಇದರಿಂದ ಮಕ್ಕಳ ಮನೋಲೋಕ ವಿಕಾಸವಾಗುತ್ತದೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳು ತಿಳಿಯುತ್ತವೆ’ ಎಂದರು.</p>.<p>‘ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ಮೊಬೈಲ್ ಫೋನ್, ಟಿವಿಗಳ ದಾಸರಾಗಬಾರದು. ಮನಸ್ಸಿಗೆ ಮುದ ನೀಡುವ ಕತೆ, ಕವನ, ಸಾಧಕರ ಪುಸ್ತಕಗಳನ್ನು ಓದಬೇಕು. ಕ್ರೀಡೆ, ರಂಗಕಲೆಗಳಲ್ಲಿ ತೊಡಗಬೇಕು. ಇದರಿಂದ ಮಗು ಕೇಂದ್ರಿತ ಕಲಿಕೆಗೆ ಮಹತ್ವ ಬರುತ್ತದೆ’ ಎಂದು ಅವರು ವಿವರಿಸಿದರು.</p>.<p>ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ನೃತ್ಯ, ರಂಗೋಲಿ ಕಲೆ ಹಾಗೂ ನಾಟಕ ಪ್ರದರ್ಶಿಸಿದರು.</p>.<p>ಸಂಸ್ಥಾಪಕ ಪಿ.ವೀರಭದ್ರಪ್ಪ, ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ವಿನಯ್, ಮುಖ್ಯ ಶಿಕ್ಷಕ ನಾಗರಾಜ್ ಹಾಗೂ ಪೋಷಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯಳಂದೂರು:‘ಪಾಲಕರು ಮಕ್ಕಳನ್ನು ಅಂಕಗಳಿಸುವ ಯಂತ್ರಗಳಂತೆ ಕಾಣದೆ, ಮಾನವೀಯ ಮೌಲ್ಯ, ಶಿಸ್ತು, ಸಂಯಮಗಳ ಸಂಗಮವಾಗಿ ರೂಪಿಸಬೇಕಾದ ಅಗತ್ಯ ಇದೆ’ ಎಂದು ಕನ್ನಡ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಎಸ್ಡಿವಿಎಸ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.</p>.<p>‘ಮಕ್ಕಳ ಕೈಗೆ ಪುಸ್ತಕ ನೀಡಬೇಕು. ಮನೆಗೆ ಒಂದಾದರೂ ಪತ್ರಿಕೆ ತರಿಸಬೇಕು. ಕೃಷಿ ಸಂಸ್ಕೃತಿ, ಗ್ರಾಮ ಜೀವನದ ಸೊಬಗನ್ನು ಆಹ್ಲಾದಿಸುವ ಮನಸ್ಸು ರೂಪಿಸಬೇಕು. ಇದರಿಂದ ಮಕ್ಕಳ ಮನೋಲೋಕ ವಿಕಾಸವಾಗುತ್ತದೆ. ಭಾರತೀಯ ಸಂಸ್ಕೃತಿಯ ಮೌಲ್ಯಗಳು ತಿಳಿಯುತ್ತವೆ’ ಎಂದರು.</p>.<p>‘ವಿದ್ಯಾರ್ಥಿಗಳು ಕಲಿಯುವ ಸಂದರ್ಭದಲ್ಲಿ ಮೊಬೈಲ್ ಫೋನ್, ಟಿವಿಗಳ ದಾಸರಾಗಬಾರದು. ಮನಸ್ಸಿಗೆ ಮುದ ನೀಡುವ ಕತೆ, ಕವನ, ಸಾಧಕರ ಪುಸ್ತಕಗಳನ್ನು ಓದಬೇಕು. ಕ್ರೀಡೆ, ರಂಗಕಲೆಗಳಲ್ಲಿ ತೊಡಗಬೇಕು. ಇದರಿಂದ ಮಗು ಕೇಂದ್ರಿತ ಕಲಿಕೆಗೆ ಮಹತ್ವ ಬರುತ್ತದೆ’ ಎಂದು ಅವರು ವಿವರಿಸಿದರು.</p>.<p>ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಜನಪದ ನೃತ್ಯ, ರಂಗೋಲಿ ಕಲೆ ಹಾಗೂ ನಾಟಕ ಪ್ರದರ್ಶಿಸಿದರು.</p>.<p>ಸಂಸ್ಥಾಪಕ ಪಿ.ವೀರಭದ್ರಪ್ಪ, ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ವಿನಯ್, ಮುಖ್ಯ ಶಿಕ್ಷಕ ನಾಗರಾಜ್ ಹಾಗೂ ಪೋಷಕರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>