ಕೀರನಹೊಲದ ನಿವಾಸಿ ಶೇಷಣ್ಣಯ್ಯ ಹಾಗೂ ಹುಚ್ಚಯ್ಯ ಬಂಧಿತರು. ಇವರಿಬ್ಬರೂ ತಂಬಡಿಗೇರಿಯ ಮಾರಮ್ಮನ ದೇವಾಲಯದ ಬಳಿ ಗೋವಾ ರಾಜ್ಯದ 6 ಮಾದರಿ ಲಾಟರಿಯನ್ನು ₹ 40 ರಿಂದ ₹ 70ಕ್ಕೆ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಇನ್ಸ್ಪೆಕ್ಟರ್ ರಮೇಶ್ ಹಾಗೂ ಕಾನ್ಸ್ಟೆಬಲ್ ವಿಶ್ವರಾಜ್ ಮತ್ತು ಪ್ರಭು ಆರೋಪಿಗಳನ್ನು ಬಂಧಿಸಿ ಅವರ ಬಳಿ ಇದ್ದ 48 ಲಾಟರಿಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ, ಬಳಿಕ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.