<p><strong>ಚಾಮರಾಜನಗರ: </strong>ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ತಡರಾತ್ರಿ, ಮಂಗಳವಾರ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ.</p>.<p>ಚಾಮರಾಜನಗರ ತಾಲ್ಲೂಕು, ಯಳಂದೂರು, ಕೊಳ್ಳೇಗಾಲ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಸಂಜೆಯೂ ವರ್ಷಧಾರೆ ಸುರಿದಿದೆ.</p>.<p>ಚಾಮರಾಜನಗರದಲ್ಲಿ ಸೋಮವಾರ ರಾತ್ರಿ 11.30ಕ್ಕೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿತು. ಬಳಿಕ ಬೆಳಿಗ್ಗೆ 6 ಗಂಟೆಯವರೆಗೂ ತುಂತುರು ಹನಿಯುತ್ತಿತ್ತು. 6.15ರಿಂದ ಮತ್ತೆ ಧಾರಾಕಾರ ಮಳೆಯಾಗಿದ್ದು, ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಸುರಿಯಿತು.</p>.<p>ವರ್ಷಧಾರೆಯಿಂದಾಗಿ ನಗರದ ಐತಿಹಾಸಿಕ ದೊಡ್ಡರಸನಕೊಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅರ್ಧಕ್ಕೂ ಹೆಚ್ಚು ಭಾಗ ತುಂಬಿದೆ. ಸೋಮವಾರ ರಾತ್ರಿಯಂತೆ ಇನ್ನು ಒಂದು ದಿನ ಮಳೆ ಬಂದರೆ ಕೊಳ ಭರ್ತಿಯಾಗಲಿದೆ.</p>.<p>ಚಾಮರಾಜನಗರ ತಾಲ್ಲೂಕಿನ ಹಲವು ಕಡೆಗಳಲ್ಲಿ ಜಮೀನುಗಳಿಗೆ ನೀರು ನಿಂತಿದ್ದು, ಬಿತ್ತನೆ ಮಾಡಿರುವ ಬೆಳೆ, ಚಿಗುರೊಡೆದಿರುವ ಪೈರು ಹಾನಿಗೀಡಾಗುವ ಆತಂಕ ಎದುರಾಗಿದೆ.</p>.<p>ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಇಳಿ ಸಂಜೆಯ ಹೊತ್ತಿಗೆ ಹದವಾಗಿ ಮಳೆಯಾಯಿತು.</p>.<p class="Subhead">ಕೃಷಿಕರ ಸಂಭ್ರಮ:ಯಳಂದೂರುತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಉತ್ತಮ ಮಳೆ ಸುರಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ವಾತಾವರಣ ತಂಪಾಗಿತ್ತು. ಸಂಜೆ ಗುಡುಗು ಸಿಡಿಲಿನ ನಡುವೆ ತುರುಸಿನ ವರ್ಷಧಾರೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು.</p>.<p>ಗ್ರಾಮೀಣ, ಪಟ್ಟಣ ಪ್ರದೇಶ ಮತ್ತು ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮಳೆ ಮುಂದುವರಿದಿದೆ.</p>.<p>ಹಣ್ಣು ತರಕಾರಿ ಬೆಳೆಗಾರರು ಕಟಾವಾದ ತರಕಾರಿಗಳನ್ನು ಸಾಗಿಸಲು ಪ್ರಯಾಸ ಪಟ್ಟರು. ಶ್ರಮಿಕರು ಮಳೆಯ ನಡುವೆಯೇ ವಾಹನಗಳಿಗೆ ಸರಕುಗಳನ್ನು ತುಂಬಿದರು.</p>.<p>‘ಸಂಜೆ ತುಂತುರು ಹನಿಗಳಿಂದ ಆರಂಭಗೊಂಡ ಮಳೆ ನಂತರ ಬಿರುಸಾಯಿತು. ಇದರಿಂದ ತೋಟಗಾರಿಕೆ ಬೆಳೆಗಳು ಮತ್ತು ಬೇಸಿಗೆ ಬೆಳೆಗಳಿಗೆ ಜೀವ ಬಂದಂತಾಗಿದೆ’ ಎಂದು ಕೃಷಿಕ ಅಂಬಳೆ ಶಿವಾನಂದಸ್ವಾಮಿ ಹೇಳಿದರು.</p>.<p class="Subhead"><strong>ಕೃಷಿಗೆ ಅಡಚಣೆ: </strong>ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಮಂಗಳವಾರ ಗಾಳಿ ಸಹಿತ ಮಳೆಯಾಗಿದೆ.</p>.<p>ಹನೂರು ಭಾಗದಲ್ಲಿಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 6 ಗಂಟೆಯವರೆಗೂ ನಿರಂತರವಾಗಿ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಜನರು ಪರದಾಡುವಂತಾಯಿತು. ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಪಿ.ಜಿ.ಪಾಳ್ಯ, ಹುಣಸೇಪಾಳ್ಯ, ಒಡೆಯರಪಾಳ್ಯದಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಯಿತು.</p>.<p>ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ ಆರು ಗಂಟೆಯ ನಂತರವೂ ತುಂತುರು ಹನಿ ಬಿದ್ದಿತು.</p>.<p class="Briefhead"><strong>ಬಾಗಿದ ವಿದ್ಯುತ್ ಕಂಬಗಳು</strong></p>.<p><strong>ಯಳಂದೂರು</strong>: ತಾಲ್ಲೂಕಿನ ಕಿನಕಹಳ್ಳಿಯಿಂದ ಕೊಳ್ಳೇಗಾಲ ತಾಲ್ಲೂಕಿನ ಎಡಮೋಳೆ ಗ್ರಾಮದವರೆಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಗಾಳಿ–ಮಳೆಯಿಂದಾಗಿ ಬಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ.</p>.<p>‘ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಈಚೆಗೆ ಕಂಬಗಳನ್ನು ಹಾಕಲಾಗಿದೆ. ಅಳವಡಿಕೆ ಕಾರ್ಯ ಸಮರ್ಪಕವಾಗಿ ಆಗದಿರುವ ಕಾರಣ ಮಳೆ ಬಂದ ತಕ್ಷಣವೇ ಕಂಬಗಳು ರಸ್ತೆಯ ಉದ್ದಕ್ಕೂ ವಾಲಿ ನಿಂತಿವೆ. ಈ ಬಗ್ಗೆ ನಿಗಮಕ್ಕೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ತಕ್ಷಣವೇ ಕಂಬಗಳನ್ನು ಸರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.</p>.<p class="Briefhead"><strong>ಮಳೆ; ಸಂತೆ ಅವ್ಯವಸ್ಥೆ</strong></p>.<p><strong>ಸಂತೇಮರಹಳ್ಳಿ:</strong> ಮಂಗಳವಾರ ಮುಂಜಾನೆ ಸುರಿದ ಮಳೆಗೆ ಸಂತೆ ಅಸ್ತವ್ಯಸ್ತವಾಯಿತು. ವರ್ಷಧಾರೆಯಲ್ಲೇ ವ್ಯಾಪಾರ ನಡೆಯಿತು. ದಿನಸಿ, ತರಕಾರಿ ನೆನೆದವು.</p>.<p>ಸಂತೆ ಬಯಲಿನಲ್ಲೇ ಮಳೆ ನೀರು ನಿಂತಿತ್ತು. ಇಡೀ ಪರಿಸರ ಕೊಚ್ಚೆಮಯವಾಗಿತ್ತು. ಗ್ರಾಹಕರು ಕೊಚ್ಚೆ ತುಳಿದುಕೊಂಡೇ ಖರೀದಿ ನಡೆಸಿದರು.</p>.<p>ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂತೆಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ವ್ಯಾಪಾರಿಗಳು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೋಮವಾರ ತಡರಾತ್ರಿ, ಮಂಗಳವಾರ ಬೆಳಿಗ್ಗೆ ಧಾರಾಕಾರ ಮಳೆಯಾಗಿದೆ.</p>.<p>ಚಾಮರಾಜನಗರ ತಾಲ್ಲೂಕು, ಯಳಂದೂರು, ಕೊಳ್ಳೇಗಾಲ, ಹನೂರು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮಂಗಳವಾರ ಸಂಜೆಯೂ ವರ್ಷಧಾರೆ ಸುರಿದಿದೆ.</p>.<p>ಚಾಮರಾಜನಗರದಲ್ಲಿ ಸೋಮವಾರ ರಾತ್ರಿ 11.30ಕ್ಕೆ ಆರಂಭಗೊಂಡ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಅಬ್ಬರಿಸಿತು. ಬಳಿಕ ಬೆಳಿಗ್ಗೆ 6 ಗಂಟೆಯವರೆಗೂ ತುಂತುರು ಹನಿಯುತ್ತಿತ್ತು. 6.15ರಿಂದ ಮತ್ತೆ ಧಾರಾಕಾರ ಮಳೆಯಾಗಿದ್ದು, ಮುಕ್ಕಾಲು ಗಂಟೆಗೂ ಹೆಚ್ಚು ಕಾಲ ಸುರಿಯಿತು.</p>.<p>ವರ್ಷಧಾರೆಯಿಂದಾಗಿ ನಗರದ ಐತಿಹಾಸಿಕ ದೊಡ್ಡರಸನಕೊಳಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅರ್ಧಕ್ಕೂ ಹೆಚ್ಚು ಭಾಗ ತುಂಬಿದೆ. ಸೋಮವಾರ ರಾತ್ರಿಯಂತೆ ಇನ್ನು ಒಂದು ದಿನ ಮಳೆ ಬಂದರೆ ಕೊಳ ಭರ್ತಿಯಾಗಲಿದೆ.</p>.<p>ಚಾಮರಾಜನಗರ ತಾಲ್ಲೂಕಿನ ಹಲವು ಕಡೆಗಳಲ್ಲಿ ಜಮೀನುಗಳಿಗೆ ನೀರು ನಿಂತಿದ್ದು, ಬಿತ್ತನೆ ಮಾಡಿರುವ ಬೆಳೆ, ಚಿಗುರೊಡೆದಿರುವ ಪೈರು ಹಾನಿಗೀಡಾಗುವ ಆತಂಕ ಎದುರಾಗಿದೆ.</p>.<p>ಮಂಗಳವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಇದ್ದು, ಇಳಿ ಸಂಜೆಯ ಹೊತ್ತಿಗೆ ಹದವಾಗಿ ಮಳೆಯಾಯಿತು.</p>.<p class="Subhead">ಕೃಷಿಕರ ಸಂಭ್ರಮ:ಯಳಂದೂರುತಾಲ್ಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಉತ್ತಮ ಮಳೆ ಸುರಿಯಿತು. ಮುಂಜಾನೆಯಿಂದಲೇ ಮೋಡ ಕವಿದ ವಾತಾವರಣವಿದ್ದು ವಾತಾವರಣ ತಂಪಾಗಿತ್ತು. ಸಂಜೆ ಗುಡುಗು ಸಿಡಿಲಿನ ನಡುವೆ ತುರುಸಿನ ವರ್ಷಧಾರೆ ಒಂದೂವರೆ ಗಂಟೆಗೂ ಹೆಚ್ಚು ಕಾಲ ಸುರಿಯಿತು.</p>.<p>ಗ್ರಾಮೀಣ, ಪಟ್ಟಣ ಪ್ರದೇಶ ಮತ್ತು ಬಿಳಿಗಿರಿರಂಗನ ಬೆಟ್ಟದ ಸುತ್ತಮುತ್ತ ಮಳೆ ಮುಂದುವರಿದಿದೆ.</p>.<p>ಹಣ್ಣು ತರಕಾರಿ ಬೆಳೆಗಾರರು ಕಟಾವಾದ ತರಕಾರಿಗಳನ್ನು ಸಾಗಿಸಲು ಪ್ರಯಾಸ ಪಟ್ಟರು. ಶ್ರಮಿಕರು ಮಳೆಯ ನಡುವೆಯೇ ವಾಹನಗಳಿಗೆ ಸರಕುಗಳನ್ನು ತುಂಬಿದರು.</p>.<p>‘ಸಂಜೆ ತುಂತುರು ಹನಿಗಳಿಂದ ಆರಂಭಗೊಂಡ ಮಳೆ ನಂತರ ಬಿರುಸಾಯಿತು. ಇದರಿಂದ ತೋಟಗಾರಿಕೆ ಬೆಳೆಗಳು ಮತ್ತು ಬೇಸಿಗೆ ಬೆಳೆಗಳಿಗೆ ಜೀವ ಬಂದಂತಾಗಿದೆ’ ಎಂದು ಕೃಷಿಕ ಅಂಬಳೆ ಶಿವಾನಂದಸ್ವಾಮಿ ಹೇಳಿದರು.</p>.<p class="Subhead"><strong>ಕೃಷಿಗೆ ಅಡಚಣೆ: </strong>ಕೊಳ್ಳೇಗಾಲ ಹಾಗೂ ಹನೂರು ತಾಲ್ಲೂಕುಗಳ ವಿವಿಧ ಕಡೆಗಳಲ್ಲೂ ಮಂಗಳವಾರ ಗಾಳಿ ಸಹಿತ ಮಳೆಯಾಗಿದೆ.</p>.<p>ಹನೂರು ಭಾಗದಲ್ಲಿಸಂಜೆ 4 ಗಂಟೆ ಸುಮಾರಿಗೆ ಆರಂಭವಾದ ಮಳೆ 6 ಗಂಟೆಯವರೆಗೂ ನಿರಂತರವಾಗಿ ಸುರಿಯಿತು. ಏಕಾಏಕಿ ಸುರಿದ ಮಳೆಯಿಂದಾಗಿ ಜನರು ಪರದಾಡುವಂತಾಯಿತು. ಲೊಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಪಿ.ಜಿ.ಪಾಳ್ಯ, ಹುಣಸೇಪಾಳ್ಯ, ಒಡೆಯರಪಾಳ್ಯದಲ್ಲಿ ಬಿದ್ದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಯಾಯಿತು.</p>.<p>ಹನೂರು ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಜೆ ಆರು ಗಂಟೆಯ ನಂತರವೂ ತುಂತುರು ಹನಿ ಬಿದ್ದಿತು.</p>.<p class="Briefhead"><strong>ಬಾಗಿದ ವಿದ್ಯುತ್ ಕಂಬಗಳು</strong></p>.<p><strong>ಯಳಂದೂರು</strong>: ತಾಲ್ಲೂಕಿನ ಕಿನಕಹಳ್ಳಿಯಿಂದ ಕೊಳ್ಳೇಗಾಲ ತಾಲ್ಲೂಕಿನ ಎಡಮೋಳೆ ಗ್ರಾಮದವರೆಗೆ ಅಳವಡಿಸಿರುವ ವಿದ್ಯುತ್ ಕಂಬಗಳು ಗಾಳಿ–ಮಳೆಯಿಂದಾಗಿ ಬಾಗಿದ್ದು, ಅಪಾಯವನ್ನು ಆಹ್ವಾನಿಸುತ್ತಿವೆ.</p>.<p>‘ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ವತಿಯಿಂದ ಈಚೆಗೆ ಕಂಬಗಳನ್ನು ಹಾಕಲಾಗಿದೆ. ಅಳವಡಿಕೆ ಕಾರ್ಯ ಸಮರ್ಪಕವಾಗಿ ಆಗದಿರುವ ಕಾರಣ ಮಳೆ ಬಂದ ತಕ್ಷಣವೇ ಕಂಬಗಳು ರಸ್ತೆಯ ಉದ್ದಕ್ಕೂ ವಾಲಿ ನಿಂತಿವೆ. ಈ ಬಗ್ಗೆ ನಿಗಮಕ್ಕೆ ದೂರು ನೀಡಿದರೂ ಪ್ರಯೋಜನ ಆಗಿಲ್ಲ’ ಎಂದು ಗ್ರಾಮಸ್ಥರು ದೂರಿದ್ದಾರೆ.</p>.<p>ತಕ್ಷಣವೇ ಕಂಬಗಳನ್ನು ಸರಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.</p>.<p class="Briefhead"><strong>ಮಳೆ; ಸಂತೆ ಅವ್ಯವಸ್ಥೆ</strong></p>.<p><strong>ಸಂತೇಮರಹಳ್ಳಿ:</strong> ಮಂಗಳವಾರ ಮುಂಜಾನೆ ಸುರಿದ ಮಳೆಗೆ ಸಂತೆ ಅಸ್ತವ್ಯಸ್ತವಾಯಿತು. ವರ್ಷಧಾರೆಯಲ್ಲೇ ವ್ಯಾಪಾರ ನಡೆಯಿತು. ದಿನಸಿ, ತರಕಾರಿ ನೆನೆದವು.</p>.<p>ಸಂತೆ ಬಯಲಿನಲ್ಲೇ ಮಳೆ ನೀರು ನಿಂತಿತ್ತು. ಇಡೀ ಪರಿಸರ ಕೊಚ್ಚೆಮಯವಾಗಿತ್ತು. ಗ್ರಾಹಕರು ಕೊಚ್ಚೆ ತುಳಿದುಕೊಂಡೇ ಖರೀದಿ ನಡೆಸಿದರು.</p>.<p>ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಂತೆಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ವ್ಯಾಪಾರಿಗಳು ಕೋರಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>