<p>ಮಹದೇಶ್ವರ ಬೆಟ್ಟ: ಹನೂರು ಶಾಸಕ ಎಂ.ಆರ್.ಮಂಜುನಾಥ್ ಬುಧವಾರ ಪೊಲೀಸ್ ಇಲಾಖೆಗೆ ಮೂರು ಗಸ್ತು (ಜೀಪ್)ವಾಹನಗಳನ್ನು ಹಸ್ತಾಂತರ ಮಾಡಿದರು.</p>.<p>ತಾಲ್ಲೂಕಿನ ಹನೂರು, ರಾಮಪುರ, ಮಲೈ ಮಹದೇಶ್ವರ ಬೆಟ್ಟದ ಠಾಣೆಗಳಿಗೆ ಹೆಚ್ಚುವರಿ ಗಸ್ತು ವಾಹನಗಳ ಅಗತ್ಯತೆ ಕುರಿತ ಮನವಿಗೆ ಸ್ಪಂದಿಸದ ಶಾಸಕರು ಹೊಸ ವಾಹನಗಳನ್ನು ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿದರು.</p>.<p>ಶಾಸಕ ಮಂಜುನಾಥ್ ಮಾತನಾಡಿ, ‘ಶಾಸಕರ ಅನುದಾನದಿಂದ ₹25 ಲಕ್ಷ ವ್ಯಯಿಸಿ ಪೊಲೀಸ್ ಇಲಾಖೆಗೆ ಜೀಪ್ಗಳನ್ನು ಖರೀದಿಸಿ ಕೊಡಲಾಗಿದೆ. ಹೊಸ ಗಸ್ತುವಾಹನಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ನೆರವಾಗಲಿದೆ’ ಎಂದರು.</p>.<p>ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ‘ಇಲಾಖೆಯಲ್ಲಿ ಗಸ್ತುವಾಹನಗಳ ಕೊರತೆ ಇರುವುದನ್ನು ಮನಗಂಡ ಶಾಸಕರು ಮೂರು ವಾಹನಗಳನ್ನು ನೀಡಿದ್ದಾರೆ. ಏಕಕಾಲಕ್ಕೆ ಮೂರು ಜೀಪ್ ನೀಡಿದ ಜಿಲ್ಲೆಯ ಮೊದಲ ಶಾಸಕರಾಗಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಹೆಚ್ಚುವರಿ ಎಸ್ಪಿ ಶಶಿಧರ್, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಿವೈಎಸ್ಪಿ ಧರ್ಮೇಂದ್ರ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಹದೇಶ್ವರ ಬೆಟ್ಟ: ಹನೂರು ಶಾಸಕ ಎಂ.ಆರ್.ಮಂಜುನಾಥ್ ಬುಧವಾರ ಪೊಲೀಸ್ ಇಲಾಖೆಗೆ ಮೂರು ಗಸ್ತು (ಜೀಪ್)ವಾಹನಗಳನ್ನು ಹಸ್ತಾಂತರ ಮಾಡಿದರು.</p>.<p>ತಾಲ್ಲೂಕಿನ ಹನೂರು, ರಾಮಪುರ, ಮಲೈ ಮಹದೇಶ್ವರ ಬೆಟ್ಟದ ಠಾಣೆಗಳಿಗೆ ಹೆಚ್ಚುವರಿ ಗಸ್ತು ವಾಹನಗಳ ಅಗತ್ಯತೆ ಕುರಿತ ಮನವಿಗೆ ಸ್ಪಂದಿಸದ ಶಾಸಕರು ಹೊಸ ವಾಹನಗಳನ್ನು ಖರೀದಿಸಿ ಪೊಲೀಸ್ ಇಲಾಖೆಗೆ ನೀಡಿದರು.</p>.<p>ಶಾಸಕ ಮಂಜುನಾಥ್ ಮಾತನಾಡಿ, ‘ಶಾಸಕರ ಅನುದಾನದಿಂದ ₹25 ಲಕ್ಷ ವ್ಯಯಿಸಿ ಪೊಲೀಸ್ ಇಲಾಖೆಗೆ ಜೀಪ್ಗಳನ್ನು ಖರೀದಿಸಿ ಕೊಡಲಾಗಿದೆ. ಹೊಸ ಗಸ್ತುವಾಹನಗಳಿಂದ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ನೆರವಾಗಲಿದೆ’ ಎಂದರು.</p>.<p>ಹಿಂದಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಮಾತನಾಡಿ, ‘ಇಲಾಖೆಯಲ್ಲಿ ಗಸ್ತುವಾಹನಗಳ ಕೊರತೆ ಇರುವುದನ್ನು ಮನಗಂಡ ಶಾಸಕರು ಮೂರು ವಾಹನಗಳನ್ನು ನೀಡಿದ್ದಾರೆ. ಏಕಕಾಲಕ್ಕೆ ಮೂರು ಜೀಪ್ ನೀಡಿದ ಜಿಲ್ಲೆಯ ಮೊದಲ ಶಾಸಕರಾಗಿದ್ದಾರೆ’ ಎಂದು ಶ್ಲಾಘಿಸಿದರು.</p>.<p>ಹೆಚ್ಚುವರಿ ಎಸ್ಪಿ ಶಶಿಧರ್, ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಇ.ರಘು, ಡಿವೈಎಸ್ಪಿ ಧರ್ಮೇಂದ್ರ ಸೇರಿದಂತೆ ಹಲವರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>