‘ಸಾರಿಗೆ ನೌಕರರು ಹಗಲು ರಾತ್ರಿ ಸಾರ್ವಜನಿಕ ಸೇವೆ ಮಾಡುತ್ತಿದ್ದಾರೆ. ಕೆಎಸ್ಆರ್ಟಿಸಿಯ ಎಲ್ಲ ವಿಚಾರಗಳಲ್ಲಿಯೂ ಸರ್ಕಾರ ನೇರವಾಗಿ ವ್ಯವಹಾರ ನಡೆಸುತ್ತಿದ್ದು, ವರ್ಗಾವಣೆ, ಹೊಸ ಬಸ್ಸುಗಳ ಖರೀದಿ, ನೌಕರರ ವೇತನ ಹೆಚ್ಚಳ, ದರ ನಿರ್ವಹಣೆ, ಪಾಸ್, ಪ್ರಯಾಣಿಕರ ನಿರ್ವಹಣೆ ಈ ಎಲ್ಲಾ ಕಾರ್ಯಗಳಿಗೆ ಸರ್ಕಾರದ ಅನುಮತಿ ಬೇಕು. ಆದರೆ, ನಮ್ಮನ್ನು ಮಾತ್ರ ಸರ್ಕಾರಿ ನೌರರರೆಂದು ಪರಿಗಣಿಸದಿರುವುದು ದುರದೃಷ್ಟಕರ’ ಎಂದು ಮನವಿ ಪ್ರತಿಭಟನಾನಿರತರು ಮನವಿ ಪತ್ರದಲ್ಲಿ ಹೇಳಿದ್ದಾರೆ.