<p>ಚಾಮರಾಜನಗರದ ಭ್ರಮರಾಂಬ ಬಡಾವಣೆಗೆ ಉತ್ತಮ ಬಡಾವಣೆ ಎಂಬ ಹೆಗ್ಗಳಿಕೆ ಇದೆ.ಆದರೆ, ಬಡಾವಣೆಯ 3ನೇ ಅಡ್ಡರಸ್ತೆಯ (22ನೇ ವಾರ್ಡ್) ಪಶ್ಚಿಮಕ್ಕೆ ಸೇರಿದ ಮನೆಗಳಲ್ಲಿ ವಾಸಿಸುತ್ತಿರುವವರ ಪಾಡು ಹೇಳ ತೀರದು. ಇಲ್ಲಿರುವುದು ಒಂದೆರಡು ಸಮಸ್ಯೆಯಲ್ಲ. ಹಲವು ಸಮಸ್ಯೆಗಳಿವೆ. ಬಹುತೇಕವು ಹಲವು ವರ್ಷಗಳಿಂದ ಬಲಿತಿರುವಂತಹದ್ದು!</p>.<p>ಈ ಭಾಗದಲ್ಲಿ 2 ಮತ್ತು 3ನೇ ಅಡ್ಡರಸ್ತೆಗಳನ್ನು ಸಂಪರ್ಕಿಸುವ ಒಂದು ರಸ್ತೆ ಇದೆ. ಇದು ಕನ್ಸರ್ವೆನ್ಸಿ ಗಲ್ಲಿ ರೀತಿಯಲ್ಲಿ ಕಂಡರೂ ಕನ್ಸರ್ವೆನ್ಸಿ ಅಲ್ಲ. ಬಡಾವಣೆ ನಿರ್ಮಾಣವಾದ ಸಮಯದಿಂದ ಈವರೆಗೂ 3ನೇ ಅಡ್ಡರಸ್ತೆಯು ಡೀವಿಯೇಷನ್ ರಸ್ತೆಯನ್ನು ಸಂಪರ್ಕಿಸುವುದಿಲ್ಲ. ಆ ಕಾರಣದಿಂದ ಈ ರಸ್ತೆ ಮಾಡಲಾಗಿದೆ. ಆದರೆ, ಈ ರಸ್ತೆಯು ಸುತ್ತಮುತ್ತಲಿನ ನಿವಾಸಿಗಳು ಹಾಗೂ 2ನೇ ಅಡ್ಡರಸ್ತೆಯಲ್ಲಿರುವ ಅಂಗಡಿಯವರು ಕಸ ಸುರಿಯುವ ತಾಣವಾಗಿದೆ. ಇಲ್ಲಿ ನಡೆದಾಡಲು ಸರಿಯಾದ ದಾರಿಯೂ ಇಲ್ಲ. </p>.<p>ರಸ್ತೆಯ ತುದಿಯಲ್ಲಿ ಅಪಾಯಕಾರಿಯಾದ ಶಕ್ತಿಶಾಲಿ ವಿದ್ಯುತ್ ಪರಿವರ್ತಕ ಇದೆ. ರಸ್ತೆಯ ತುದಿಯನ್ನು ಶೇ 75ರಷ್ಟು ಇದು ಆವರಿಸಿದೆ. ಜನ ಓಡಾಡುವ ರಸ್ತೆ ಮಧ್ಯೆ ಯಾರದೋ ಅನುಕೂಲಕ್ಕೆ ಈ ವಿದ್ಯುತ್ ಪರಿವರ್ತಕ ಸ್ಥಾಪಿಸಲಾಗಿದೆ. ಹಲವಾರು ಬಾರಿ ಸೆಸ್ಕ್ ಹಾಗೂ ನಗರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.</p>.<p>ಇದು ಹೆಸರಿಗಷ್ಟೇ ರಸ್ತೆ. ಹಳ್ಳಿಗಳಲ್ಲಿರುವ ಕಾಲುದಾರಿಗಿಂತ ಕಿರಿದಾಗಿದೆ.ಈ ಅಡ್ಡರಸ್ತೆಯಲ್ಲಿ ವಾಸಿಸುತ್ತಿರುವುದಕ್ಕೆ ಹಾಗೂ ಈ ಸಂಪರ್ಕ ರಸ್ತೆಯಲ್ಲಿ ಓಡಾಡಲು ಪ್ರತಿ ನಿತ್ಯ ಅವಮಾನ, ನಾಚಿಕೆ ಆಗುತ್ತದೆ. ಇಡೀ ಜಿಲ್ಲೆಗೆ ಸಾಂಕ್ರಾಮಿಕ ರೋಗವನ್ನು ಧಾರಾಳವಾಗಿ ಹಂಚಬಹುದಾದ ಸ್ಥಿತಿ ಇದೆ. ನಾಗರಿಕ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿ ಇದು. ಉತ್ತಮ ಬಡಾವಣೆ ಎನಿಸಿಕೊಂಡಿರುವ ಸ್ಥಳದಲ್ಲಿರುವ ಈ ಅಡ್ಡರಸ್ತೆ ಕೊಳೆಗೇರಿ ಆಗಿದೆ.</p>.<p>ಎರಡನೇ ಮತ್ತು 3ನೇ ಅಡ್ಡರಸ್ತೆಗಳ ನಡುವೆ ಇರುವ ಕನ್ಸರ್ವೆನ್ಸಿ ಅಸಹ್ಯವಾಗಿದೆ. ಎರಡೂ ಅಡ್ಡರಸ್ತೆಗಳ ಮನೆಗಳ ಚರಂಡಿಗಳಿಗಿಂತ ಈ ಗಲ್ಲಿಯ ಮೋರಿಗಳು ಎತ್ತರದಲ್ಲಿವೆ. ಹೀಗಾಗಿ ಅಲ್ಲಿಂದ ಬರುವ ನೀರು ಮುಂದೆ ಹೋಗಲಾರದೆ ಆ ಮನೆಯ ಗೋಡೆಗಳಿಗೆ ನೀರಿನ ತೇವಾಂಶ ಹೆಚ್ಚಿದೆ. ಈ ಗಲ್ಲಿಯಲ್ಲಿ ಗಿಡಗಳು, ಕಳೆಗಳು ದಟ್ಟ ಅರಣ್ಯ ಬೆಳೆದಂತೆ ಬೆಳೆದಿವೆ. ಆ ಜಾಗ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದೆ.ಈ ಸಂಪರ್ಕ ರಸ್ತೆ ಮತ್ತು ಕನ್ಸರ್ವೆನ್ಸಿಯಲ್ಲಿ ನೀರು ಮುಂದೆ ಹೋಗಲಾರದೆ ಮಳೆ ಬಂದಾಗ ರಸ್ತೆಗೆ ಬಂದು ಕೊನೆಯ ಮನೆಗೆ ನುಗ್ಗುತ್ತದೆ.</p>.<p>ವಿಶೇಷ ಎಂದರೆ,ಎರಡನೇ ಅಡ್ಡರಸ್ತೆಯಲ್ಲಿ ನಗರಸಭೆಯ ಆಯುಕ್ತರ ಅಧಿಕೃತ ನಿವಾಸ ಇದೆ!</p>.<p>ನಗರಸಭೆಯವರು ಸ್ಥಳೀಯ ನಿವಾಸಿಗಳನ್ನು ಈ ಬವಣೆಗಳಿಂದ ಪಾರು ಮಾಡಿ.<br /><br />– ಕೆ.ವೆಂಕಟರಾಜು, ನಿವಾಸಿ</p>.<p class="Briefhead">ತಾಲ್ಲೂಕು ಕಚೇರಿ ಕಟ್ಟಡದ ಚಾವಣಿ ಸರಿಪಡಿಸಿ</p>.<p>ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಕಟ್ಟಡದ ಮೇಲ್ಚಾವಣಿ ಶಿಥಿಲವಾಗಿದ್ದು, ಕೆಲವು ಕಡೆಗಳಲ್ಲಿ ಸಿಮೆಂಟ್ ಕಿತ್ತುಕೊಂಡು ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಕಚೇರಿ ಕೆಲಸಗಳಿಗಾಗಿ ಹೋಗಬೇಕಾಗಿದೆ.</p>.<p>ಕಟ್ಟಡವನ್ನು ನೋಡುತ್ತಿದ್ದರೆ, ಅಪಾಯ ಸ್ಥಿತಿಯಲ್ಲಿ ಇರುವಂತೆ ಕಾಣುತ್ತದೆ. ಹಲವು ಸಮಯದಿಂದಲು ಇದೇ ರೀತಿ ಇದ್ದು, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿನಂಪ್ರತಿ ಇದನ್ನು ನೋಡುತ್ತಿದ್ದರೂ, ಯಾರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.</p>.<p>ದುರಸ್ತಿ ಮಾಡದಿದ್ದರೆ ಅಪಾಯ ಇನ್ನಷ್ಟು ಹೆಚ್ಚಲಿದೆ. ಅಧಿಕಾರಿಗಳು ತಕ್ಷಣವೇ ಸಿಮೆಂಟ್ ಕಿತ್ತು ಬಂದಿರುವ ಜಾಗಗಳನ್ನು ಸರಿಪಡಿಸಬೇಕು, ನೀರು ಸೋರಿಕೆಯಾಗುವುದನ್ನು ತಡೆಯಬೇಕು. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಬೇಕು.</p>.<p>–ರವಿ, ಸೋಮಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರದ ಭ್ರಮರಾಂಬ ಬಡಾವಣೆಗೆ ಉತ್ತಮ ಬಡಾವಣೆ ಎಂಬ ಹೆಗ್ಗಳಿಕೆ ಇದೆ.ಆದರೆ, ಬಡಾವಣೆಯ 3ನೇ ಅಡ್ಡರಸ್ತೆಯ (22ನೇ ವಾರ್ಡ್) ಪಶ್ಚಿಮಕ್ಕೆ ಸೇರಿದ ಮನೆಗಳಲ್ಲಿ ವಾಸಿಸುತ್ತಿರುವವರ ಪಾಡು ಹೇಳ ತೀರದು. ಇಲ್ಲಿರುವುದು ಒಂದೆರಡು ಸಮಸ್ಯೆಯಲ್ಲ. ಹಲವು ಸಮಸ್ಯೆಗಳಿವೆ. ಬಹುತೇಕವು ಹಲವು ವರ್ಷಗಳಿಂದ ಬಲಿತಿರುವಂತಹದ್ದು!</p>.<p>ಈ ಭಾಗದಲ್ಲಿ 2 ಮತ್ತು 3ನೇ ಅಡ್ಡರಸ್ತೆಗಳನ್ನು ಸಂಪರ್ಕಿಸುವ ಒಂದು ರಸ್ತೆ ಇದೆ. ಇದು ಕನ್ಸರ್ವೆನ್ಸಿ ಗಲ್ಲಿ ರೀತಿಯಲ್ಲಿ ಕಂಡರೂ ಕನ್ಸರ್ವೆನ್ಸಿ ಅಲ್ಲ. ಬಡಾವಣೆ ನಿರ್ಮಾಣವಾದ ಸಮಯದಿಂದ ಈವರೆಗೂ 3ನೇ ಅಡ್ಡರಸ್ತೆಯು ಡೀವಿಯೇಷನ್ ರಸ್ತೆಯನ್ನು ಸಂಪರ್ಕಿಸುವುದಿಲ್ಲ. ಆ ಕಾರಣದಿಂದ ಈ ರಸ್ತೆ ಮಾಡಲಾಗಿದೆ. ಆದರೆ, ಈ ರಸ್ತೆಯು ಸುತ್ತಮುತ್ತಲಿನ ನಿವಾಸಿಗಳು ಹಾಗೂ 2ನೇ ಅಡ್ಡರಸ್ತೆಯಲ್ಲಿರುವ ಅಂಗಡಿಯವರು ಕಸ ಸುರಿಯುವ ತಾಣವಾಗಿದೆ. ಇಲ್ಲಿ ನಡೆದಾಡಲು ಸರಿಯಾದ ದಾರಿಯೂ ಇಲ್ಲ. </p>.<p>ರಸ್ತೆಯ ತುದಿಯಲ್ಲಿ ಅಪಾಯಕಾರಿಯಾದ ಶಕ್ತಿಶಾಲಿ ವಿದ್ಯುತ್ ಪರಿವರ್ತಕ ಇದೆ. ರಸ್ತೆಯ ತುದಿಯನ್ನು ಶೇ 75ರಷ್ಟು ಇದು ಆವರಿಸಿದೆ. ಜನ ಓಡಾಡುವ ರಸ್ತೆ ಮಧ್ಯೆ ಯಾರದೋ ಅನುಕೂಲಕ್ಕೆ ಈ ವಿದ್ಯುತ್ ಪರಿವರ್ತಕ ಸ್ಥಾಪಿಸಲಾಗಿದೆ. ಹಲವಾರು ಬಾರಿ ಸೆಸ್ಕ್ ಹಾಗೂ ನಗರಸಭೆಯ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ.</p>.<p>ಇದು ಹೆಸರಿಗಷ್ಟೇ ರಸ್ತೆ. ಹಳ್ಳಿಗಳಲ್ಲಿರುವ ಕಾಲುದಾರಿಗಿಂತ ಕಿರಿದಾಗಿದೆ.ಈ ಅಡ್ಡರಸ್ತೆಯಲ್ಲಿ ವಾಸಿಸುತ್ತಿರುವುದಕ್ಕೆ ಹಾಗೂ ಈ ಸಂಪರ್ಕ ರಸ್ತೆಯಲ್ಲಿ ಓಡಾಡಲು ಪ್ರತಿ ನಿತ್ಯ ಅವಮಾನ, ನಾಚಿಕೆ ಆಗುತ್ತದೆ. ಇಡೀ ಜಿಲ್ಲೆಗೆ ಸಾಂಕ್ರಾಮಿಕ ರೋಗವನ್ನು ಧಾರಾಳವಾಗಿ ಹಂಚಬಹುದಾದ ಸ್ಥಿತಿ ಇದೆ. ನಾಗರಿಕ ಸಮಾಜ ತಲೆ ತಗ್ಗಿಸುವ ಪರಿಸ್ಥಿತಿ ಇದು. ಉತ್ತಮ ಬಡಾವಣೆ ಎನಿಸಿಕೊಂಡಿರುವ ಸ್ಥಳದಲ್ಲಿರುವ ಈ ಅಡ್ಡರಸ್ತೆ ಕೊಳೆಗೇರಿ ಆಗಿದೆ.</p>.<p>ಎರಡನೇ ಮತ್ತು 3ನೇ ಅಡ್ಡರಸ್ತೆಗಳ ನಡುವೆ ಇರುವ ಕನ್ಸರ್ವೆನ್ಸಿ ಅಸಹ್ಯವಾಗಿದೆ. ಎರಡೂ ಅಡ್ಡರಸ್ತೆಗಳ ಮನೆಗಳ ಚರಂಡಿಗಳಿಗಿಂತ ಈ ಗಲ್ಲಿಯ ಮೋರಿಗಳು ಎತ್ತರದಲ್ಲಿವೆ. ಹೀಗಾಗಿ ಅಲ್ಲಿಂದ ಬರುವ ನೀರು ಮುಂದೆ ಹೋಗಲಾರದೆ ಆ ಮನೆಯ ಗೋಡೆಗಳಿಗೆ ನೀರಿನ ತೇವಾಂಶ ಹೆಚ್ಚಿದೆ. ಈ ಗಲ್ಲಿಯಲ್ಲಿ ಗಿಡಗಳು, ಕಳೆಗಳು ದಟ್ಟ ಅರಣ್ಯ ಬೆಳೆದಂತೆ ಬೆಳೆದಿವೆ. ಆ ಜಾಗ ಬಯಲು ಶೌಚಾಲಯವಾಗಿ ಪರಿವರ್ತನೆಯಾಗಿದೆ.ಈ ಸಂಪರ್ಕ ರಸ್ತೆ ಮತ್ತು ಕನ್ಸರ್ವೆನ್ಸಿಯಲ್ಲಿ ನೀರು ಮುಂದೆ ಹೋಗಲಾರದೆ ಮಳೆ ಬಂದಾಗ ರಸ್ತೆಗೆ ಬಂದು ಕೊನೆಯ ಮನೆಗೆ ನುಗ್ಗುತ್ತದೆ.</p>.<p>ವಿಶೇಷ ಎಂದರೆ,ಎರಡನೇ ಅಡ್ಡರಸ್ತೆಯಲ್ಲಿ ನಗರಸಭೆಯ ಆಯುಕ್ತರ ಅಧಿಕೃತ ನಿವಾಸ ಇದೆ!</p>.<p>ನಗರಸಭೆಯವರು ಸ್ಥಳೀಯ ನಿವಾಸಿಗಳನ್ನು ಈ ಬವಣೆಗಳಿಂದ ಪಾರು ಮಾಡಿ.<br /><br />– ಕೆ.ವೆಂಕಟರಾಜು, ನಿವಾಸಿ</p>.<p class="Briefhead">ತಾಲ್ಲೂಕು ಕಚೇರಿ ಕಟ್ಟಡದ ಚಾವಣಿ ಸರಿಪಡಿಸಿ</p>.<p>ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಕಟ್ಟಡದ ಮೇಲ್ಚಾವಣಿ ಶಿಥಿಲವಾಗಿದ್ದು, ಕೆಲವು ಕಡೆಗಳಲ್ಲಿ ಸಿಮೆಂಟ್ ಕಿತ್ತುಕೊಂಡು ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಸಾರ್ವಜನಿಕರು ಜೀವ ಭಯದಲ್ಲೇ ಕಚೇರಿ ಕೆಲಸಗಳಿಗಾಗಿ ಹೋಗಬೇಕಾಗಿದೆ.</p>.<p>ಕಟ್ಟಡವನ್ನು ನೋಡುತ್ತಿದ್ದರೆ, ಅಪಾಯ ಸ್ಥಿತಿಯಲ್ಲಿ ಇರುವಂತೆ ಕಾಣುತ್ತದೆ. ಹಲವು ಸಮಯದಿಂದಲು ಇದೇ ರೀತಿ ಇದ್ದು, ತಹಶೀಲ್ದಾರ್ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ದಿನಂಪ್ರತಿ ಇದನ್ನು ನೋಡುತ್ತಿದ್ದರೂ, ಯಾರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ.</p>.<p>ದುರಸ್ತಿ ಮಾಡದಿದ್ದರೆ ಅಪಾಯ ಇನ್ನಷ್ಟು ಹೆಚ್ಚಲಿದೆ. ಅಧಿಕಾರಿಗಳು ತಕ್ಷಣವೇ ಸಿಮೆಂಟ್ ಕಿತ್ತು ಬಂದಿರುವ ಜಾಗಗಳನ್ನು ಸರಿಪಡಿಸಬೇಕು, ನೀರು ಸೋರಿಕೆಯಾಗುವುದನ್ನು ತಡೆಯಬೇಕು. ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯಬೇಕು.</p>.<p>–ರವಿ, ಸೋಮಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>