ಅಂಬೇಡ್ಕರ್ ಉದ್ಯಾನದಲ್ಲಿ ಹಾಳಾಗಿರುವ ಆಟಿಕೆಗಳನ್ನು ತಕ್ಷಣ ಬದಲಿಸಲಾಗುವುದು ಕೆಲವು ಆಟಿಕೆಗಳನ್ನು ದುರಸ್ತಿ ಮಾಡಿಲಾಗುವುದು. ಉದ್ಯಾನದ ಸ್ವಚ್ಛತೆ ಸಹಿತ ಅಭಿವೃದ್ಧಿಗೆ ಒತ್ತು ನೀಡಲಾಗುವುದು.
–ಸುರೇಶ್ ನಗರಸಭೆ ಅಧ್ಯಕ್ಷ
‘ಉದ್ಯಾನಕ್ಕೆ ಕನಿಷ್ಠ ಸೌಲಭ್ಯ ಇಲ್ಲ’
ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿರುವ ಆಟಿಕೆಗಳ ದುರಸ್ತಿಗೆ ಹಾಗೂ ಉದ್ಯಾನದ ಸ್ವಚ್ಛತೆಗೆ ಜಿಲ್ಲಾಡಳಿತ ನಗರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಉದ್ಯಾನದೊಳಗೆ ಕುಡಿಯುವ ನೀರು ಶೌಚಾಲಯ ಸ್ವಚ್ಛತೆ ಸಹಿತ ಕನಿಷ್ಠ ಸೌಲಭ್ಯಗಳೂ ಇಲ್ಲ. ನಾಲ್ಕೈದು ವರ್ಷಗಳ ಹಿಂದೆ ಹಳೆಯ ಆಟಿಕೆಗಳಿಗೆ ಬಣ್ಣ ಬಳಿದು ಬಿಲ್ ಮಂಜೂರು ಮಾಡಿಸಿಕೊಳ್ಳಲಾಗಿದೆ. –ಭಾನುಪ್ರಕಾಶ್ ಸಾಮಾಜಿಕ ಕಾರ್ಯಕರ್ತ