ಚಾಮರಾಜನಗರ: ತಾಲ್ಲೂಕಿನ ಕಡುವಿನ ಕಟ್ಟೆ ಹುಂಡಿ (ಕೆ.ಕೆ.ಹುಂಡಿ) ಪ್ರದೇಶದಲ್ಲಿ ಆತಂಕ ಸೃಷ್ಟಿಸಿದ್ದ ಚಿರತೆಯು ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಭಾನುವಾರ ಬಿದ್ದಿದೆ.
ಇದೇ 18ರಂದು ಕೆ.ಕೆ.ಹುಂಡಿಯಲ್ಲಿ ಸ್ಥಳೀಯರ ಕಣ್ಣಿಗೆ ಚಿರತೆ ಕಾಣಿಸಿಕೊಂಡಿತ್ತು. ತಕ್ಷಣ ಅವರು ಅರಣ್ಯ ಇಲಾಖೆಯ ಗಮನಕ್ಕೆ ತಂದಿದ್ದರು. ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಸಿಬ್ಬಂದಿ ಚಿರತೆಯ ಸೆರೆಗಾಗಿ ಬೋನು ಇರಿಸಿದ್ದರು. ವಾರ ಕಳೆದಿದ್ದರೂ, ಚಿರತೆ ಸೆರೆಯಾಗಿರಲಿಲ್ಲ.
‘ಭಾನುವಾರ ಬೆಳಿಗ್ಗೆ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ನಂತರ ಸಿಬ್ಬಂದಿಯು ಅದನ್ನು ದಟ್ಟ ಅರಣ್ಯದ ಒಳಗೆ ಬಿಟ್ಟಿದ್ದಾರೆ’ ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಜಿ.ಸಂತೋಷ್ಕುಮಾರ್ ಅವರು ತಿಳಿಸಿದ್ದಾರೆ.