ಟೈಲರ್ ಅಂಗಡಿಯಿಂದ ಮಗನ ಶಾಲಾ ಸಮವಸ್ತ್ರ ತರುವಂತೆ ರತ್ನಮ್ಮ ₹300 ಅನ್ನು ಸುರೇಶನಿಗೆ ಕೊಟ್ಟಿದ್ದಳು. ಆ ಹಣವನ್ನು ಮದ್ಯ ಖರೀದಿಸಲುಬಳಸಿದ್ದ ಸುರೇಶ, ಸಮವಸ್ತ್ರ ತಂದಿರಲಿಲ್ಲ. ಈ ವಿಚಾರವಾಗಿ 2017ರ ಜುಲೈ 12ರಂದು ರಾತ್ರಿ 9 ಗಂಟೆಗೆ ರತ್ನಮ್ಮ ಹಾಗೂ ಸುರೇಶನ ನಡುವೆ ಜಗಳವಾಗಿತ್ತು. ಮನೆಯಲ್ಲಿ ಕ್ಯಾನ್ನಲ್ಲಿದ್ದ ಸೀಮೆಎಣ್ಣೆಯನ್ನು ರತ್ನಮ್ಮ ಮೈಮೇಲೆ ಸುರಿದು ಬೆಂಕಿ ಹಚ್ಚಿದ್ದ. ರತ್ನಮ್ಮ ಹಾಗೂ ಅವರ ಮಗ ಜೋರಾಗಿ ಕಿರುಚಿಕೊಂಡಾಗ ಅಕ್ಕ ಪಕ್ಕದ ಮನೆಯವರು ಬಂದು ಬೆಂಕಿ ಆರಿಸಿದ್ದರು. ತೀವ್ರವಾಗಿ ಸುಟ್ಟಗಾಯಗಳಿಂದ ನರಳಾಡುತ್ತಿದ್ದ ರತ್ನಮ್ಮಳನ್ನು ಜಿಲ್ಲಾಸ್ಪತ್ರೆ, ನಂತರ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಸಿಎಸ್ಐ ಮಿಷನ್ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಜುಲೆ 18ರಂದು ಬೆಳಿಗ್ಗೆ ರತ್ನಮ್ಮ ಮೃತಪಟ್ಟಿದ್ದಳು.