ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಬೈಕ್ ಸವಾರ

Last Updated 14 ಮಾರ್ಚ್ 2023, 8:39 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಗಡಿಭಾಗ ತಾಳವಾಡಿ-ತಲೆಮಲೆ- ದಿಂಬಂ ರಸ್ತೆಯಲ್ಲಿ ಬೈಕ್ ಸವಾರರೊಬ್ಬರು ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಎದುರಿನ ವಾಹನದಲ್ಲಿರುವರು ಚಿತ್ರೀಕರಣ ಮಾಡಿದ್ದಾರೆ.

ಪ್ರಾಣಾಪಾಯದಿಂದ ಪಾರಾದ ಸವಾರರನ್ನು ತಾಳವಾಡಿ ಸಮೀಪದ ನಲ್ಲಿತಾಳಪುರದ ರಾಮಸ್ವಾಮಿ ಎಂದು ಗುರುತಿಸಲಾಗಿದೆ.

ಅವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ರಸ್ತೆ ತಿರುವಿನಲ್ಲಿ ಆನೆ ಎದುರಾಗಿದ್ದು, ಗಾಬರಿಗೊಂಡ ಸವಾರ ರಸ್ತೆ ಬದಿಯಲ್ಲಿ ಬಿದ್ದರು. ತಕ್ಷಣ ಆನೆ ಅವರತ್ತ ನುಗ್ಗಿತು. ಈ ಸಂದರ್ಭದಲ್ಲಿ ಎದುರಿಗೆ ಕಾರಿನಲ್ಲಿದ್ದವರು ಜೋರಾಗಿ ಹಾರ್ನ್ ಹಾಕಿ, ಚೀರಾಡಿದರು. ಗದ್ದಲದಿಂದಾಗಿ ಆನೆ ಅಲ್ಲೇ ನಿಂತಿತು. ಸವಾರ ಕಾರಿನತ್ತ ಬಂದು ಪ್ರಾಣ ಉಳಿಸಿಕೊಂಡರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT