ಘಟನೆ ವಿವರ: ಹನೂರು ತಾಲ್ಲೂಕಿನ ಗೋಪಿನಾಥಂ ಗ್ರಾಮ ಪಂಚಾಯಿತಿಗೆ ಸೇರಿದ ಆಲಂಬಾಡಿ ಗ್ರಾಮದ ಮೇರಿ ವಿಧವೆಯಾಗಿದ್ದರು. ಕುಟುಂಬದವರ ಒಪ್ಪಿಗೆ ಪಡೆದು ಗ್ರಾಮದ ಸುರೇಶ್ ಎಂಬುವರ ಜೊತೆ 2ನೇ ಮದುವೆಯಾಗಿದ್ದರು. ಸುರೇಶ್ ನಿತ್ಯವೂ ಮೇರಿ ಅವರೊಂದಿಗೆ ಪ್ರತಿನಿತ್ಯ ಜಗಳ ಮಾಡಿ ಕಿರುಕುಳ ನೀಡುತ್ತಿದ್ದರು. ಈ ವಿಚಾರ ಮೇರಿಯ ತಮ್ಮ ಸೆಲ್ವಗೆ ತಿಳಿದಿತ್ತು. 2017 ನವೆಂಬರ್ 25 ರಂದು ಮೇರಿ ಮತ್ತು ಸುರೇಶ್ ಜಗಳವಾಡುತ್ತಿದ್ದುದನ್ನು ಗಮನಿಸಿದ ಸೆಲ್ವ, ಸುರೇಶ್ಗೆ ಅವಾಚ್ಯ ಶಬ್ದಗಳಿಂದ ಬೈದು ಬೈದು, ‘ನೀನು ಇದ್ದರೆ ತಾನೆ ನಮ್ಮ ಅಕ್ಕನಿಗೆ ಪ್ರತಿನಿತ್ಯ ಹೊಡೆದು ಚಿತ್ರಹಿಂಸೆ ನೀಡುತ್ತಿಯಾ? ನಿನ್ನನ್ನು ಸಾಯಿಸುತ್ತೇನೆ’ ಎಂದು ಹೇಳಿ ಹಿಟ್ಟಿನ ದೊಣ್ಣೆಯಿಂದ ತಲೆಗೆ, ಕೈ, ಕಾಲು ಸೇರಿದಂತೆ ಭಾಗಕ್ಕೆ ಹೊಡೆದಿದ್ದ. ತಡೆಯಲು ಬಂದ ಅಕ್ಕ ಮೇರಿಗೂ ಹೊಡೆದು ಪರಾರಿಯಾಗಿದ್ದ.