ವೈ.ಕೆ.ಮೋಳೆ ಮಲ್ಲಿಕಾರ್ಜುನಸ್ವಾಮಿ ತಂಡದ ನಾದಸ್ವರ, ರಾಮಸಮುದ್ರದ ಶಂಕರ ತಂಡದ ಗೊರವರ ಕುಣಿತ, ಶ್ರೀನಿವಾಸ ಮೂರ್ತಿ ತಂಡದ ಬೀಸು ಕಂಸಾಳೆ ನೃತ್ಯ, ಕೊಳ್ಳೇಗಾಲದ ದಶಪಾಲ್ ತಂಡ ವಾದ್ಯ ಸಂಗೀತ, ಜಾಲಹಳ್ಳಿ ಹುಂಡಿ ಗೌರಮ್ಮ, ಮದ್ದೂರಿನ ದುಂಡಮ್ಮ ಹಾಗೂ ಆಲೂರಿನ ದೇವಿರಮ್ಮ, ಸಿದ್ದಯ್ಯನಪುರದ ಸಿದ್ದಮ್ಮ ಅವರ ಸೋಬಾನೆ ಪದ, ರಾಚಯ್ಯ ತಂಡದ ಭಜನೆ, ಶಿವಣ್ಣ ತಂಡದ ರಂಗಗೀತೆಗಳ ಗಾಯನ ಹಾಗೂ ನಿಂಗಶೆಟ್ಟಿ ಮತ್ತು ಮಾದಶೆಟ್ಟಿ ಅವರ ತಂಬೂರಿ ನೀಲಗಾರರ ಪದಗಳು ಗಮನ ಸೆಳೆದವು.