<p><strong>ಕೊಳ್ಳೇಗಾಲ</strong> (ಚಾಮರಾಜನಗರ ಜಿಲ್ಲೆ): ಅಧಿಕ ಬಡ್ಡಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ₹2.60 ಕೋಟಿ ವಂಚಿಸಿದ ಆರೋಪದ ಮೇರೆಗೆ ತಮಿಳುನಾಡಿನ ಡಿ.ಆರ್.ಕಾರ್ತಿ ಚಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಳೀಯ ಶಾಖೆಯ ನಾಲ್ವರು ಸಿಬ್ಬಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಕೊಯಮತ್ತೂರು ಜಿಲ್ಲೆಯ ಸತ್ಯಮಂಗಲ ನಿವಾಸಿ ಹಾಗೂ ಶಾಖೆಯ ಮುಖ್ಯಸ್ಥ ಕಾರ್ತಿಕೇಯನ್, ವ್ಯವಸ್ಥಾಪಕ, ಸತ್ತೇಗಾಲ ಗ್ರಾಮದ ಪರಮೇಶ್ವರ್, ನಗರದ ನಿವಾಸಿಗಳಾದ ಸಹಾಯಕ ವ್ಯವಸ್ಥಾಪಕ ದಿಲೀಪ್ ಹಾಗೂ ಸಿಬ್ಬಂದಿ ಚಂದ್ರು ಆರೋಪಿಗಳು. </p>.<p>ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಶ್ರೀ ಗುರುಮಲ್ಲೇಶ್ವರ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿರುವ ಶಾಖೆಯ ವಿರುದ್ಧ ತಾಲ್ಲೂಕಿನ ಪಾಳ್ಯ ಗ್ರಾಮದ ನಿವಾಸಿ ಸೀಗನಾಯಕ ದೂರು ನೀಡಿದ್ದಾರೆ. ‘ನನ್ನನ್ನೂ ಸೇರಿಸಿ ಒಟ್ಟು 35 ಮಂದಿಯನ್ನು ವಂಚಿಸಲಾಗಿದೆ’ ಎಂದು ಆರೋಪಿಸಿದ್ದಾರೆ.</p>.<p>‘₹50 ಸಾವಿರದಿಂದ ₹1 ಕೋಟಿವರೆಗೂ ಚೀಟಿ ವ್ಯವಹಾರ ನಡೆದಿದ್ದು, 2025ರ ಡಿಸೆಂಬರ್ನಲ್ಲಿ ಬಾಗಿಲು ಮುಚ್ಚಿದ ಕಂಪನಿ ಇಲ್ಲಿವರೆಗೂ ತೆರೆದಿಲ್ಲ. ತಮಿಳುನಾಡಿನ ಗೋಪಿನಾಥಂ, ಸತ್ಯಮಂಗಲ, ಕೊಯಮತ್ತೂರು ಪಟ್ಟಣದಲ್ಲೂ ಶಾಖೆಗಳಿದ್ದು, ಅಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿರುವುದಾಗಿ ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ</strong> (ಚಾಮರಾಜನಗರ ಜಿಲ್ಲೆ): ಅಧಿಕ ಬಡ್ಡಿ ಕೊಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಹಣ ಪಡೆದು ₹2.60 ಕೋಟಿ ವಂಚಿಸಿದ ಆರೋಪದ ಮೇರೆಗೆ ತಮಿಳುನಾಡಿನ ಡಿ.ಆರ್.ಕಾರ್ತಿ ಚಿಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಸ್ಥಳೀಯ ಶಾಖೆಯ ನಾಲ್ವರು ಸಿಬ್ಬಂದಿ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. </p>.<p>ಕೊಯಮತ್ತೂರು ಜಿಲ್ಲೆಯ ಸತ್ಯಮಂಗಲ ನಿವಾಸಿ ಹಾಗೂ ಶಾಖೆಯ ಮುಖ್ಯಸ್ಥ ಕಾರ್ತಿಕೇಯನ್, ವ್ಯವಸ್ಥಾಪಕ, ಸತ್ತೇಗಾಲ ಗ್ರಾಮದ ಪರಮೇಶ್ವರ್, ನಗರದ ನಿವಾಸಿಗಳಾದ ಸಹಾಯಕ ವ್ಯವಸ್ಥಾಪಕ ದಿಲೀಪ್ ಹಾಗೂ ಸಿಬ್ಬಂದಿ ಚಂದ್ರು ಆರೋಪಿಗಳು. </p>.<p>ನಗರದ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆಯ ಶ್ರೀ ಗುರುಮಲ್ಲೇಶ್ವರ ಕಾಂಪ್ಲೆಕ್ಸ್ 2ನೇ ಮಹಡಿಯಲ್ಲಿರುವ ಶಾಖೆಯ ವಿರುದ್ಧ ತಾಲ್ಲೂಕಿನ ಪಾಳ್ಯ ಗ್ರಾಮದ ನಿವಾಸಿ ಸೀಗನಾಯಕ ದೂರು ನೀಡಿದ್ದಾರೆ. ‘ನನ್ನನ್ನೂ ಸೇರಿಸಿ ಒಟ್ಟು 35 ಮಂದಿಯನ್ನು ವಂಚಿಸಲಾಗಿದೆ’ ಎಂದು ಆರೋಪಿಸಿದ್ದಾರೆ.</p>.<p>‘₹50 ಸಾವಿರದಿಂದ ₹1 ಕೋಟಿವರೆಗೂ ಚೀಟಿ ವ್ಯವಹಾರ ನಡೆದಿದ್ದು, 2025ರ ಡಿಸೆಂಬರ್ನಲ್ಲಿ ಬಾಗಿಲು ಮುಚ್ಚಿದ ಕಂಪನಿ ಇಲ್ಲಿವರೆಗೂ ತೆರೆದಿಲ್ಲ. ತಮಿಳುನಾಡಿನ ಗೋಪಿನಾಥಂ, ಸತ್ಯಮಂಗಲ, ಕೊಯಮತ್ತೂರು ಪಟ್ಟಣದಲ್ಲೂ ಶಾಖೆಗಳಿದ್ದು, ಅಲ್ಲಿಯೂ ವಂಚನೆ ಪ್ರಕರಣಗಳು ದಾಖಲಾಗಿರುವುದಾಗಿ ಗೊತ್ತಾಗಿದೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>