‘ಸರಿಯಾದ ಸಮಯಕ್ಕೆ ಮಳೆ ಸುರಿದಿದೆ. ಒಂದು ಗಂಟೆಗೂ ಹೆಚ್ಚು ಸುರಿದ ಮಳೆಗೆ ಭತ್ತ, ಎಳ್ಳು, ಹುಚ್ಚೆಳ್ಳು ಬೆಳೆ ಕೃತಿಕಾ ನಕ್ಷತ್ರದಲ್ಲಿ ರೈತರ ಕೈಹಿಡಿಯಲಿದೆ. ಬೆಂದ ಭೂಮಿ ನೀರು ಕುಡಿಯುತ್ತಿದ್ದು, ಉತ್ತಮ ಮಳೆ ಮುಂದುವರಿದರೆ ಉತ್ತುವ, ಬಿತ್ತುವ ಚಟುವಟಿಕೆಗೆ ವೇಗ ಬರಲಿದೆ. ಕೆರೆ ಕಟ್ಟೆಯತ್ತ ಜಲ ಪೂರಣಗೊಂಡರೆ ಜಲ ಜೀವಿಗಳ ಸಂತತಿ ಹೆಚ್ಚಲಿದೆ’ ಎಂದು ಆಲ್ಕೆರೆ ಅಗ್ರಹಾರ ರೈತ ರಾಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.