ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಕಾಡಂಚಿನಲ್ಲಿ ಬೇರಂಬಾಡಿ ಕೆರೆ ಕೋಡಿ ಬಿದ್ದಿರುವುದು
ಮಹದೇಶ್ವರ ಬೆಟ್ಟಕ್ಕೆ ಹೋಗುವ ರಸ್ತೆಗೆ ಬಿದಿರ ಮೆಳೆ ಬಿದ್ದು ವಾಹನಗಳ ಸಂಚಾರಕ್ಕೆ ತೊಡಕಾಗಿದೆ
ಚಾಮರಾಜನಗರ ತಾಲ್ಲೂಕಿನ ಚಂದಕವಾಡಿಯಲ್ಲಿ ಸುವರ್ಣಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದು
ಬೆಳೆ ಜಲಾವೃತ; ರೈತರಿಗೆ ಸಂಕಷ್ಟ
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿ ನೀರು ಸಂಗ್ರಹವಾಗಿದ್ದು ಬೆಳೆಗಳು ಜಲಾವೃತವಾಗಿವೆ. ರೈತರಿಗೆ ಬಿತ್ತನೆ ಮಾಡಲು ಸಾಧ್ಯವಾಗದಿರುವುದು ಒಂದೆಡೆಯಾದರೆ ಬಿತ್ತನೆ ಮಾಡಿದ ಬೆಳೆ ಕೊಚ್ಚಿ ಹೋಗುವ ಆತಂಕ ಇನ್ನೊಂದೆಡೆ. ಇದರೊಂದಿಗೆ ಬೆಳೆದ ಫಸಲುಗಳು ಜಲಾವೃತವಾಗಿರುವುದು ಬೆಳೆ ನಷ್ಟದ ಭೀತಿಯನ್ನು ತಂದೊಡ್ಡಿದೆ. ಗುಂಡ್ಲುಪೇಟೆ ತಾಲ್ಲೂಕಿನ ಕೊತನೂರು ಗ್ರಾಮದಲ್ಲಿ ಮಳೆ ನೀರು ರೈತರೊಬ್ಬರ ಜಮೀನಿಗೆ ನುಗ್ಗಿದ್ದು ಈರುಳ್ಳಿ ಹಾಗೂ ಅರಿಸಿನ ಬೆಳೆ ನೀರಿನಲ್ಲಿ ಮುಳುಗಿದೆ.