ಏಪ್ರಿಲ್ನಲ್ಲಿ ಮಳೆ ಕೈಕೊಟ್ಟ ಪರಿಣಾಮ ಹತ್ತಿ ಬೆಳೆ ಕ್ಷೇತ್ರ ಕಡಿಮೆಯಾಗಿದೆ. 6540 ಹೆಕ್ಟೇರ್ ಹತ್ತಿ ಬಿತ್ತನೆ ಪ್ರತಿಯಾಗಿ 2760 ಹೆಕ್ಟೇರ್ ಮಾತ್ರ ಬಿತ್ತನೆ ನಡೆದಿದೆ. ರೈತರು ಹತ್ತಿಯ ಬದಲಾಗಿ ಶೇಂಗಾ ಮುಸುಕಿನ ಜೋಳ ಬೆಳೆಯುವತ್ತ ಆಸಕ್ತಿ ತೋರುತ್ತಿದ್ದು ಅಗತ್ಯ ಬಿತ್ತನೆ ಬೀಜ ಪೂರೈಕೆ ಮಾಡಲಾಗುತ್ತಿದೆ. ಆಗಸ್ಟ್ ಸೆಪ್ಟೆಂಬರ್ವರೆಗೂ ಜಿಲ್ಲೆಯಲ್ಲಿ ಬಿತ್ತನೆ ನಡೆಯುವುದರಿಂದ 1.9 ಲಕ್ಷ ಹೆಕ್ಟೇರ್ ಗುರಿ ಮುಟ್ಟುವ ವಿಶ್ವಾಸವಿದೆ.